<p>ಬಾಗೇಪಲ್ಲಿ: ಪಟ್ಟಣದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಬಿಸಿಲಿನ ತಾಪಮಾನ 39 ಡಿಗ್ರಿ ಸೆಲ್ಸಿಯಷ್ನಷ್ಟು ಏರಿಕೆ ಕಂಡಿದೆ. ಜನರು ದಾಹ ತೀರಿಸಿಕೊಳ್ಳಲು ಮಜ್ಜಿಗೆ, ಕಬ್ಬಿನ ರಸ, ಎಳನೀರು, ನಿಂಬೆಹಣ್ಣಿನ ರಸ, ಹಣ್ಣಿನ ಸಲಾಡ್, ಕಲ್ಲಂಗಡಿ ಹಣ್ಣು ಸೇರಿದಂತೆ ತಂಪು ಪಾನೀಯಗಳಿಗೆ ಮೊರೆ ಹೋಗಿದ್ದಾರೆ.</p>.<p>ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಬಿಸಿಲಿನ ತಾಪ ಹೆಚ್ಚಾಗಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನ ಹಾಗೂ ಜನರ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುವಂತೆ ಆಗಿದೆ.</p>.<p>ಪಟ್ಟಣದ ಮುಖ್ಯರಸ್ತೆಯಲ್ಲಿನ ಉರ್ದು ಶಾಲೆಯ ಪಕ್ಕದಲ್ಲಿ ಅಂಗಡಿ ಮುಂದೆ ನಿಂಬೆ ಹಣ್ಣಿನ ರಸ, ಹಣ್ಣಿನ ಸಲಾಡ್, ತಂಪುಪಾನೀಯಗಳ ಮಾರಾಟ ಹೆಚ್ಚಾಗಿದೆ. ನಿಂಬೆಹಣ್ಣಿನ ರಸ ಒಂದು ಲೋಟಕ್ಕೆ ₹10ಕ್ಕೆ, ಹಣ್ಣುಗಳ ಸಲಾಡ್ ₹20ಕ್ಕೆ ಮಾರಾಟವಾಗುತ್ತಿದೆ. ಹಣ್ಣಿನ ರಸಕ್ಕೆ ಬೇಡಿಕೆ ಈ ವರ್ಷ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.</p>.<p>ಪಟ್ಟಣದ ಮುಖ್ಯರಸ್ತೆಯಲ್ಲಿ ಹಾಗೂ ಹೊರವಲಯದ ಗೂಳೂರು ರಸ್ತೆ, ಬೈಪಾಸ್ ರಸ್ತೆ, ಟಿ.ಬಿ ಕ್ರಾಸ್, ಕಾರಕೂರು ಕ್ರಾಸ್ಗಳಲ್ಲಿ ಕಬ್ಬಿನ ರಸದ ಅಂಗಡಿ, ಎಳನೀರು, ತಂಪು ಪಾನೀಯ ಅಂಗಡಿಗಳು ಇವೆ. ಕುಡಿಯುವ ನೀರಿನ ಅರ್ಧ, ಒಂದು ಲೀಟರ್ ಬಾಟಲ್ಗಳಿಗೆ ಬೇಡಿಕೆ ಹೆಚ್ಚಾಗಿದೆ.</p>.<p>ಡಾ.ಎಚ್.ಎನ್.ವೃತ್ತದಲ್ಲಿ ಕರ್ಬೂಜ, ಪರಂಗಿ ಹಣ್ಣುಗಳು, ಬಸ್ ನಿಲ್ದಾಣದ ಮುಂದೆ, ಉರ್ದು ಶಾಲೆಯ ಬಳಿಯ ಮರದ ಕೆಳಗೆ, ಬೀದಿ ಬದಿಯಲ್ಲಿ ಮಜ್ಜಿಗೆ, ನಿಂಬೆ ರಸ, ಕಬ್ಬಿನ ಹಾಲು ಸೇರಿದಂತೆ ತಂಪುಪಾನೀಯಗಳ ವ್ಯಾಪಾರ ಹೆಚ್ಚಾಗಿದೆ.</p>.<p>ತಾಪಮಾನ ಹೆಚ್ಚಾಗಿರುವುದರಿಂದ ಅರ್ಧ ಗಂಟೆಗೊಮ್ಮೆ ನೀರು, ತಂಪುಪಾನೀಯ, ಹಣ್ಣು ಸೇವಿಸಿದರೂ ದಾಹ ಕಡಿಮೆ ಆಗುತ್ತಿಲ್ಲ ಎಂದು ಪಟ್ಟಣದ ವ್ಯಾಪಾರಿ ಬಿ.ಎ.ಮುಜಸ್ಸಿಮ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗೇಪಲ್ಲಿ: ಪಟ್ಟಣದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಬಿಸಿಲಿನ ತಾಪಮಾನ 39 ಡಿಗ್ರಿ ಸೆಲ್ಸಿಯಷ್ನಷ್ಟು ಏರಿಕೆ ಕಂಡಿದೆ. ಜನರು ದಾಹ ತೀರಿಸಿಕೊಳ್ಳಲು ಮಜ್ಜಿಗೆ, ಕಬ್ಬಿನ ರಸ, ಎಳನೀರು, ನಿಂಬೆಹಣ್ಣಿನ ರಸ, ಹಣ್ಣಿನ ಸಲಾಡ್, ಕಲ್ಲಂಗಡಿ ಹಣ್ಣು ಸೇರಿದಂತೆ ತಂಪು ಪಾನೀಯಗಳಿಗೆ ಮೊರೆ ಹೋಗಿದ್ದಾರೆ.</p>.<p>ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಬಿಸಿಲಿನ ತಾಪ ಹೆಚ್ಚಾಗಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನ ಹಾಗೂ ಜನರ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುವಂತೆ ಆಗಿದೆ.</p>.<p>ಪಟ್ಟಣದ ಮುಖ್ಯರಸ್ತೆಯಲ್ಲಿನ ಉರ್ದು ಶಾಲೆಯ ಪಕ್ಕದಲ್ಲಿ ಅಂಗಡಿ ಮುಂದೆ ನಿಂಬೆ ಹಣ್ಣಿನ ರಸ, ಹಣ್ಣಿನ ಸಲಾಡ್, ತಂಪುಪಾನೀಯಗಳ ಮಾರಾಟ ಹೆಚ್ಚಾಗಿದೆ. ನಿಂಬೆಹಣ್ಣಿನ ರಸ ಒಂದು ಲೋಟಕ್ಕೆ ₹10ಕ್ಕೆ, ಹಣ್ಣುಗಳ ಸಲಾಡ್ ₹20ಕ್ಕೆ ಮಾರಾಟವಾಗುತ್ತಿದೆ. ಹಣ್ಣಿನ ರಸಕ್ಕೆ ಬೇಡಿಕೆ ಈ ವರ್ಷ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.</p>.<p>ಪಟ್ಟಣದ ಮುಖ್ಯರಸ್ತೆಯಲ್ಲಿ ಹಾಗೂ ಹೊರವಲಯದ ಗೂಳೂರು ರಸ್ತೆ, ಬೈಪಾಸ್ ರಸ್ತೆ, ಟಿ.ಬಿ ಕ್ರಾಸ್, ಕಾರಕೂರು ಕ್ರಾಸ್ಗಳಲ್ಲಿ ಕಬ್ಬಿನ ರಸದ ಅಂಗಡಿ, ಎಳನೀರು, ತಂಪು ಪಾನೀಯ ಅಂಗಡಿಗಳು ಇವೆ. ಕುಡಿಯುವ ನೀರಿನ ಅರ್ಧ, ಒಂದು ಲೀಟರ್ ಬಾಟಲ್ಗಳಿಗೆ ಬೇಡಿಕೆ ಹೆಚ್ಚಾಗಿದೆ.</p>.<p>ಡಾ.ಎಚ್.ಎನ್.ವೃತ್ತದಲ್ಲಿ ಕರ್ಬೂಜ, ಪರಂಗಿ ಹಣ್ಣುಗಳು, ಬಸ್ ನಿಲ್ದಾಣದ ಮುಂದೆ, ಉರ್ದು ಶಾಲೆಯ ಬಳಿಯ ಮರದ ಕೆಳಗೆ, ಬೀದಿ ಬದಿಯಲ್ಲಿ ಮಜ್ಜಿಗೆ, ನಿಂಬೆ ರಸ, ಕಬ್ಬಿನ ಹಾಲು ಸೇರಿದಂತೆ ತಂಪುಪಾನೀಯಗಳ ವ್ಯಾಪಾರ ಹೆಚ್ಚಾಗಿದೆ.</p>.<p>ತಾಪಮಾನ ಹೆಚ್ಚಾಗಿರುವುದರಿಂದ ಅರ್ಧ ಗಂಟೆಗೊಮ್ಮೆ ನೀರು, ತಂಪುಪಾನೀಯ, ಹಣ್ಣು ಸೇವಿಸಿದರೂ ದಾಹ ಕಡಿಮೆ ಆಗುತ್ತಿಲ್ಲ ಎಂದು ಪಟ್ಟಣದ ವ್ಯಾಪಾರಿ ಬಿ.ಎ.ಮುಜಸ್ಸಿಮ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>