<p><strong>ಚಿಕ್ಕಬಳ್ಳಾಪುರ</strong>: ಇಲ್ಲಿನ ಮೆಗಾಡೇರಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ರಾಸು ವಿಮಾ ಯೋಜನೆಯ ಚೆಕ್ಗಳನ್ನು ವಿತರಿಸಲಾಯಿತು.</p>.<p>ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೋಚಿಮುಲ್ ನಿರ್ದೇಶನ ಎನ್.ಸಿ. ವೆಂಕಟೇಶ್, ‘ಹೈನುಗಾರರ ರಾಸುಗಳಿಗೆ ಈ ಮೊದಲು ವರ್ಷಕ್ಕೆ ಒಂದು ಬಾರಿ ಮಾತ್ರ ಒಕ್ಕೂಟದಿಂದ ವಿಮಾ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ ಒಕ್ಕೂಟಕ್ಕೆ ನೂತನ ಮಂಡಳಿ ರಚನೆಯಾದ ಬಳಿಕ ವರ್ಷದಲ್ಲಿ ಎರಡು ಬಾರಿ ರಾಸು ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.</p>.<p>ರೈತರು ಹೊಸದಾಗಿ ಮಧ್ಯಂತರ ವರ್ಷದಲ್ಲಿ ಹಸು ಖರೀದಿಸಿದರೆ ಅಥವಾ ಚಿಕ್ಕಕರುಗಳು ಪಡ್ಡೆಗಳಾದರೆ ರಾಸು ವಿಮೆಗಾಗಿ ಒಂದು ವರ್ಷದ ಅವಧಿಯವರೆಗೆ ಕಾಯಬೇಕಾಗಿತ್ತು. ಆಕಸ್ಮಿಕವಾಗಿ ರಾಸು ವಿಮೆ ಇಲ್ಲದ ಹಸು ಮರಣ ಹೊಂದಿದಲ್ಲಿ ಯಾವುದೇ ಪರಿಹಾರ ದೊರೆಯುತ್ತಿರಲಿಲ್ಲ. ಈ ಎಲ್ಲವನ್ನೂ ಮನಗಂಡು ವರ್ಷದಲ್ಲಿ ಎರಡು ಬಾರಿ ರಾಸು ವಿಮೆ ಒದಗಿಸಲಾಗುತ್ತಿದೆ. ರೈತರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಕೋರಿದರು.</p>.<p>ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಕೃತಕ ಗರ್ಭಧಾರಣೆಯಿಂದ ಹೆಣ್ಣು ಕರುಗಳನ್ನು ಪಡೆಯುವ ಯೋಜನೆಯನ್ನು ಒಕ್ಕೂಟದಿಂದ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಶೇ 75ರಷ್ಟು ರಿಯಾಯಿತಿಯಲ್ಲಿ ಒದಗಿಸುವುದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.</p>.<p>52 ರಾಸುಗಳ ಪಲಾನುಭವಿಗಳಿಗೆ ₹ 31.40 ಲಕ್ಷದ ಚೆಕ್ಗಳನ್ನು ಹಾಗೂ ಕೋಮುಲ್ ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿರುವ ಸದಸ್ಯರು ಮರಣ ಹೊಂದಿದರೆ ಮರಣ ಪರಿಹಾರವಾಗಿ ಪಾವತಿಸುವ ₹ 1 ಲಕ್ಷ ಮೌಲ್ಯದ ಚೆಕ್ ವಿತರಿಸಲಾಯಿತು.</p>.<p>ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಿ.ಕೆ. ಶಿವಕುಮಾರ್, ವಿಸ್ತರಣಾಧಿಕಾರಿಗಳಾದ ಎಸ್.ಎನ್. ರಮೇಶ್ಬಾಬು, ಕೆ.ಎನ್. ಸದಾಶಿವ, ಡಿ. ಮಂಜುನಾಥ, ಎನ್. ಸತ್ಯನಾರಾಯಣ, ಎಂ.ಯು. ಮಂಜುಳಾ ಮತ್ತು ಪಾಪಣ್ಣ, ವಿಎಂಪಿಸಿಎಸ್ ನೌಕರ ಸಂಘದ ಪದಾಧಿಕಾರಿ ದೇವರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಇಲ್ಲಿನ ಮೆಗಾಡೇರಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ರಾಸು ವಿಮಾ ಯೋಜನೆಯ ಚೆಕ್ಗಳನ್ನು ವಿತರಿಸಲಾಯಿತು.</p>.<p>ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೋಚಿಮುಲ್ ನಿರ್ದೇಶನ ಎನ್.ಸಿ. ವೆಂಕಟೇಶ್, ‘ಹೈನುಗಾರರ ರಾಸುಗಳಿಗೆ ಈ ಮೊದಲು ವರ್ಷಕ್ಕೆ ಒಂದು ಬಾರಿ ಮಾತ್ರ ಒಕ್ಕೂಟದಿಂದ ವಿಮಾ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ ಒಕ್ಕೂಟಕ್ಕೆ ನೂತನ ಮಂಡಳಿ ರಚನೆಯಾದ ಬಳಿಕ ವರ್ಷದಲ್ಲಿ ಎರಡು ಬಾರಿ ರಾಸು ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.</p>.<p>ರೈತರು ಹೊಸದಾಗಿ ಮಧ್ಯಂತರ ವರ್ಷದಲ್ಲಿ ಹಸು ಖರೀದಿಸಿದರೆ ಅಥವಾ ಚಿಕ್ಕಕರುಗಳು ಪಡ್ಡೆಗಳಾದರೆ ರಾಸು ವಿಮೆಗಾಗಿ ಒಂದು ವರ್ಷದ ಅವಧಿಯವರೆಗೆ ಕಾಯಬೇಕಾಗಿತ್ತು. ಆಕಸ್ಮಿಕವಾಗಿ ರಾಸು ವಿಮೆ ಇಲ್ಲದ ಹಸು ಮರಣ ಹೊಂದಿದಲ್ಲಿ ಯಾವುದೇ ಪರಿಹಾರ ದೊರೆಯುತ್ತಿರಲಿಲ್ಲ. ಈ ಎಲ್ಲವನ್ನೂ ಮನಗಂಡು ವರ್ಷದಲ್ಲಿ ಎರಡು ಬಾರಿ ರಾಸು ವಿಮೆ ಒದಗಿಸಲಾಗುತ್ತಿದೆ. ರೈತರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಕೋರಿದರು.</p>.<p>ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಕೃತಕ ಗರ್ಭಧಾರಣೆಯಿಂದ ಹೆಣ್ಣು ಕರುಗಳನ್ನು ಪಡೆಯುವ ಯೋಜನೆಯನ್ನು ಒಕ್ಕೂಟದಿಂದ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಶೇ 75ರಷ್ಟು ರಿಯಾಯಿತಿಯಲ್ಲಿ ಒದಗಿಸುವುದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.</p>.<p>52 ರಾಸುಗಳ ಪಲಾನುಭವಿಗಳಿಗೆ ₹ 31.40 ಲಕ್ಷದ ಚೆಕ್ಗಳನ್ನು ಹಾಗೂ ಕೋಮುಲ್ ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿರುವ ಸದಸ್ಯರು ಮರಣ ಹೊಂದಿದರೆ ಮರಣ ಪರಿಹಾರವಾಗಿ ಪಾವತಿಸುವ ₹ 1 ಲಕ್ಷ ಮೌಲ್ಯದ ಚೆಕ್ ವಿತರಿಸಲಾಯಿತು.</p>.<p>ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಿ.ಕೆ. ಶಿವಕುಮಾರ್, ವಿಸ್ತರಣಾಧಿಕಾರಿಗಳಾದ ಎಸ್.ಎನ್. ರಮೇಶ್ಬಾಬು, ಕೆ.ಎನ್. ಸದಾಶಿವ, ಡಿ. ಮಂಜುನಾಥ, ಎನ್. ಸತ್ಯನಾರಾಯಣ, ಎಂ.ಯು. ಮಂಜುಳಾ ಮತ್ತು ಪಾಪಣ್ಣ, ವಿಎಂಪಿಸಿಎಸ್ ನೌಕರ ಸಂಘದ ಪದಾಧಿಕಾರಿ ದೇವರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>