ಹಳ್ಳಿ, ನಗರ, ಪಟ್ಟಣಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಮ್ಮ ಮನೆ, ಪರಿಸರ, ಅಂಗಳವನ್ನು ಸ್ವಚ್ಛವಾಗಿ ಇರಿಸಬೇಕು. ಎಲ್ಲವನ್ನೂ ನಗರಸಭೆ, ಪುರಸಭೆಯವರು ಬಂದು ಮಾಡಬೇಕು ಎನ್ನುವ ಧೋರಣೆಯನ್ನು ಬಿಡಬೇಕು. ತಮ್ಮ ಮನೆಯ ಪಕ್ಕದ ಖಾಲಿ ನಿವೇಶಗಳಲ್ಲಿ ಜನರು ಕಸವನ್ನು ಎಸೆಯುತ್ತಾರೆ. ನಗರ ಸ್ಥಳೀಯ ಸಂಸ್ಥೆಗಳ ಕಸದ ವಾಹನ ಬಂದರೂ ಕಸವನ್ನು ಕೊಡಬೇಕು ಎನ್ನುವ ಪರಿಜ್ಞಾನವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.