<p><strong>ಚಿಕ್ಕಬಳ್ಳಾಪುರ</strong>: ‘ಸಿದ್ದರಾಮಯ್ಯ ಅವರೇ ಅಹಿಂದ ಚಳವಳಿಯ ಬೆಳ್ಳಿತಟ್ಟೆಯಲ್ಲಿ ಅಧಿಕಾರ ಉಂಡಿದ್ದೀರಿ. ಈ ಚಳವಳಿ ನಿಮಗೆ ಅಧಿಕಾರ ಕೊಟ್ಟಿದೆ. ಆದರೆ ನೀವು ಯಾವುದೇ ಶ್ರಮಪಟ್ಟಿಲ್ಲ. ದೇವರಾಜ ಅರಸು ಅವರಂತೆ ಜನನಾಯಕರಲ್ಲ. ದಲಿತ ಸಮುದಾಯದ ಹೊಟ್ಟೆಯ ಮೇಲೆ ಹೊಡೆಯಬೇಡಿ’ ಎಂದು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರರಾದ ಕೋಟಿಗಾನಹಳ್ಳಿ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.</p><p>ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಸಿಪಿ ಮತ್ತು ಟಿಎಸ್ಪಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ಅಷ್ಟೂ ಹಣವನ್ನು ಪರಿಶಿಷ್ಟ ಸಮುದಾಯಗಳಿಗೆ ವಾಪಸ್ ತಂದುಕೊಡಬೇಕು. ಪರಿಶಿಷ್ಟ ಸಮುದಾಯಕ್ಕೆ ಪ್ರತ್ಯೇಕವಾದ ಬಜೆಟ್ ಮಂಡಿಸಬೇಕು’ ಎಂದು ಆಗ್ರಹಿಸಿದರು.</p><p>ಎಸ್ಸಿಪಿ ಮತ್ತು ಟಿಎಸ್ಪಿ ಹಣಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಬೇಕು. ನೀವು ಮಾಡಿರುವ ದ್ರೋಹಕ್ಕೆ ಪರಿಶಿಷ್ಟ ಸಮುದಾಯದ ನಮ್ಮ ಮಕ್ಕಳು ಅಭಿವೃದ್ಧಿ ವಿಚಾರದಲ್ಲಿ ಎರಡು ತಲೆಮಾರು ಹಿಂದಕ್ಕೆ ಹೋಗುವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.</p><p>ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಣ್ಣಾಮುಚ್ಚಾಲೆ ಆಡುವುದು ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ಅವರು ಮಾತನಾಡುತ್ತಿರುವ ಭಾಷೆ ಸರಿ ಇಲ್ಲ. ದಲಿತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದರು. </p><p>ಕಾಂಗ್ರೆಸ್ ದಲಿತರ ಹೆಸರಿನಲ್ಲಿ ಕುಟುಂಬಗಳನ್ನು ಬೆಳೆಸುತ್ತಿದೆ. ಕೆ.ಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ, ಮೋಟಮ್ಮ ಅವರ ಕುಟುಂಬ ಬೆಳೆಸುತ್ತಿದ್ದೀರಿ. ಇವರು ದಲಿತ ಚಳವಳಿಗಳಿಗೆ ಬೆವರು ಹರಿಸಿಲ್ಲ. ದಲಿತ ಚಳವಳಿ ಈ ನೆಲದಲ್ಲಿ ದೊಡ್ಡ ತ್ಯಾಗ ಮಾಡಿದೆ. ಇವರಿಗೆ ನಾಯಕತ್ವ ನೀಡಬೇಕಾಗಿತ್ತು. ಆದರೆ ಆ ರೀತಿಯಲ್ಲಿ ಆಗುತ್ತಿಲ್ಲ ಎಂದರು.</p><p>ಒಳಮೀಸಲಾತಿ ಹೆಸರಿನಲ್ಲಿ 30 ವರ್ಷಗಳಿಂದ ಪರಿಶಿಷ್ಟ ಸಮುದಾಯವನ್ನು ಎಡಗೈ, ಬಲಗೈ ಎಂದು ವಿಭಜಿಸಿದರು. ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಚರಿತ್ರಾರ್ಹವಾದುದು ಎಂದರು. </p><p>ಉನ್ನತ ಹುದ್ದೆಗಳಲ್ಲಿರುವ ನಮ್ಮ ಸಮುದಾಯದವರು ಸಮುದಾಯಕ್ಕೆ ಏನು ಮಾಡದೇ ಇರಲಿ. ದ್ರೋಹ ಮಾಡಲಿ ಚಿಂತೆಯಿಲ್ಲ. ಆದರೆ ಕೆನೆಪದರವನ್ನು ಜಾರಿಗೊಳಿಸಬಾರದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ‘ಸಿದ್ದರಾಮಯ್ಯ ಅವರೇ ಅಹಿಂದ ಚಳವಳಿಯ ಬೆಳ್ಳಿತಟ್ಟೆಯಲ್ಲಿ ಅಧಿಕಾರ ಉಂಡಿದ್ದೀರಿ. ಈ ಚಳವಳಿ ನಿಮಗೆ ಅಧಿಕಾರ ಕೊಟ್ಟಿದೆ. ಆದರೆ ನೀವು ಯಾವುದೇ ಶ್ರಮಪಟ್ಟಿಲ್ಲ. ದೇವರಾಜ ಅರಸು ಅವರಂತೆ ಜನನಾಯಕರಲ್ಲ. ದಲಿತ ಸಮುದಾಯದ ಹೊಟ್ಟೆಯ ಮೇಲೆ ಹೊಡೆಯಬೇಡಿ’ ಎಂದು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರರಾದ ಕೋಟಿಗಾನಹಳ್ಳಿ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.</p><p>ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಸಿಪಿ ಮತ್ತು ಟಿಎಸ್ಪಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ಅಷ್ಟೂ ಹಣವನ್ನು ಪರಿಶಿಷ್ಟ ಸಮುದಾಯಗಳಿಗೆ ವಾಪಸ್ ತಂದುಕೊಡಬೇಕು. ಪರಿಶಿಷ್ಟ ಸಮುದಾಯಕ್ಕೆ ಪ್ರತ್ಯೇಕವಾದ ಬಜೆಟ್ ಮಂಡಿಸಬೇಕು’ ಎಂದು ಆಗ್ರಹಿಸಿದರು.</p><p>ಎಸ್ಸಿಪಿ ಮತ್ತು ಟಿಎಸ್ಪಿ ಹಣಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಬೇಕು. ನೀವು ಮಾಡಿರುವ ದ್ರೋಹಕ್ಕೆ ಪರಿಶಿಷ್ಟ ಸಮುದಾಯದ ನಮ್ಮ ಮಕ್ಕಳು ಅಭಿವೃದ್ಧಿ ವಿಚಾರದಲ್ಲಿ ಎರಡು ತಲೆಮಾರು ಹಿಂದಕ್ಕೆ ಹೋಗುವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.</p><p>ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಣ್ಣಾಮುಚ್ಚಾಲೆ ಆಡುವುದು ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ಅವರು ಮಾತನಾಡುತ್ತಿರುವ ಭಾಷೆ ಸರಿ ಇಲ್ಲ. ದಲಿತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದರು. </p><p>ಕಾಂಗ್ರೆಸ್ ದಲಿತರ ಹೆಸರಿನಲ್ಲಿ ಕುಟುಂಬಗಳನ್ನು ಬೆಳೆಸುತ್ತಿದೆ. ಕೆ.ಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ, ಮೋಟಮ್ಮ ಅವರ ಕುಟುಂಬ ಬೆಳೆಸುತ್ತಿದ್ದೀರಿ. ಇವರು ದಲಿತ ಚಳವಳಿಗಳಿಗೆ ಬೆವರು ಹರಿಸಿಲ್ಲ. ದಲಿತ ಚಳವಳಿ ಈ ನೆಲದಲ್ಲಿ ದೊಡ್ಡ ತ್ಯಾಗ ಮಾಡಿದೆ. ಇವರಿಗೆ ನಾಯಕತ್ವ ನೀಡಬೇಕಾಗಿತ್ತು. ಆದರೆ ಆ ರೀತಿಯಲ್ಲಿ ಆಗುತ್ತಿಲ್ಲ ಎಂದರು.</p><p>ಒಳಮೀಸಲಾತಿ ಹೆಸರಿನಲ್ಲಿ 30 ವರ್ಷಗಳಿಂದ ಪರಿಶಿಷ್ಟ ಸಮುದಾಯವನ್ನು ಎಡಗೈ, ಬಲಗೈ ಎಂದು ವಿಭಜಿಸಿದರು. ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಚರಿತ್ರಾರ್ಹವಾದುದು ಎಂದರು. </p><p>ಉನ್ನತ ಹುದ್ದೆಗಳಲ್ಲಿರುವ ನಮ್ಮ ಸಮುದಾಯದವರು ಸಮುದಾಯಕ್ಕೆ ಏನು ಮಾಡದೇ ಇರಲಿ. ದ್ರೋಹ ಮಾಡಲಿ ಚಿಂತೆಯಿಲ್ಲ. ಆದರೆ ಕೆನೆಪದರವನ್ನು ಜಾರಿಗೊಳಿಸಬಾರದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>