ಸಮಾಜದ ಮುಖಂಡ ಗಿರಿಧರ್ ಮಾತನಾಡಿ, ಮಡಿವಾಳ ಮಾಚಿದೇವ ಬಿಜಾಪುರ ಸಿಂದಗಿ ಹಿಪ್ಪರಗಿಯಲ್ಲಿ 1170ರಲ್ಲಿ ಜನಿಸಿದರು. ಅಂದಿನ ಕಾಲಘಟ್ಟದಲ್ಲಿ ಜಾತಿ ಪದ್ಧತಿ ಕಂದಾಚಾರಗಳಿಂದಾಗಿ ಕೆಳ ಜಾತಿಗಳ ಸ್ಥಿತಿಗತಿ ಅತಿ ದಾರುಣವಾಗಿತ್ತು. ಇದಕ್ಕೆ ಕಾರಣ ಶಿಕ್ಷಣದ ಕೊರತೆಯಾಗಿತ್ತು. ಇದರ ಸೂಕ್ಷ್ಮತೆ ಅರಿತ ಮಾಚಿದೇವ ಬಸವಣ್ಣ ಅನುಯಾಯಿ ಶಿಕ್ಷಣ ಪಡೆದು ವಚನಗಳನ್ನು ಅಧ್ಯಯನ ಮಾಡಿದರು. ಸರಳ ರೀತಿಯಲ್ಲಿ ವಚನಗಳನ್ನು ಬರೆದು ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.