<p><strong>ಚಿಕ್ಕಬಳ್ಳಾಪುರ:</strong> ಸೀಬೆ ಹಣ್ಣಿಗೆ ಬೆಲೆ ಮತ್ತು ಮಾರುಕಟ್ಟೆ ಇಲ್ಲದೆ ಕಂಗಾಲಾಗಿರುವ ತಾಲ್ಲೂಕಿನ ಚೊಕ್ಕಹಳ್ಳಿಯ ರೈತ ರಾಜಣ್ಣ ಹಣ್ಣುಗಳನ್ನು ಸೀಬೆ ಗಿಡಗಳ ಬುಡದಲ್ಲಿ ಪಾತಿ ಮಾಡಿ ಅವುಗಳನ್ನು ಮಣ್ಣಿಗೆ ಸೇರಿಸುತ್ತಿದ್ದಾರೆ. ಖರ್ಚು ಮಾಡಿದ ಬಂಡವಾಳವೂ ಅವರಿಗೆ ವಾಪಸಾಗದ ಸ್ಥಿತಿ ಎದುರಾಗಿದೆ.</p>.<p>ಎರಡು ದಿನಗಳ ಹಿಂದೆ ತಲಾ 22 ಕೆ.ಜಿಯ 32 ಕ್ರೇಟ್ ಸೀಬೆ ಹಣ್ಣನ್ನು ಮಾರಾಟಕ್ಕೆ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಸರಕನ್ನು ಯಾರೂ ಖರೀದಿಸಿಲ್ಲ. ಅಂತಿಮವಾಗಿ ರಸ್ತೆ ಬದಿಯ ವ್ಯಾಪಾರಿಗಳಿಗೆ ಎಲ್ಲ ಹಣ್ಣನ್ನು ₹ 2 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.</p>.<p>‘ವಾಹನದ ಬಾಡಿಗೆಯೇ ₹ 2,500. ಕನಿಷ್ಠ ಬಾಡಿಗೆ ಹಣವೂ ಬರಲಿಲ್ಲ. ಹಣ್ಣು ಕೀಳಲು 12 ಕೂಲಿ ಕಾರ್ಮಿಕರಿಗೆ ತಲಾ ₹ 250 ನೀಡಿದ್ದೆ. ಎಲ್ಲವೂ ನಷ್ಟವಾಯಿತು. ಇದರಿಂದ ಬೇಸರಗೊಂಡು ಹಣ್ಣನ್ನು ಕೀಳಿಸಿ ಗಿಡಗಳ ಬುಡಕ್ಕೆ ಹಾಕಿಸುತ್ತಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸುವರು ರಾಜಣ್ಣ. ಅವರ ಒಂದೂವರೆ ಎಕರೆ ಜಮೀನಿನಲ್ಲಿ ಅಲಹಾಬಾದ್ ತಳಿಯ ಮುನ್ನೂರು ಸೀಬೆ|<br />ಮರಗಳಿವೆ.</p>.<p>ಔಷಧಿ, ಕೆಮ್ಮಣ್ಣ, ಕಡಲೇಕಾಯಿ ಹಿಂಡಿ, ಬೇವಿನ ಹಿಂಡಿಗೆ ಹಣ ಖರ್ಚು ಮಾಡಿದ್ದೆ. ಕಳೆದ ವರ್ಷವೂ ಕೊರೊನಾ ಕಾರಣದಿಂದ ನಷ್ಟವಾಯಿತು. ಈ ಬಾರಿಗೂ ಇದೇ ಕಥೆ. ಹೀಗೆ ಆದರೆ ಗಿಡೆಗಳನ್ನೇ ಕೀಳಿಸುವೆ ಎನ್ನುತ್ತಾರೆ ಅವರು.</p>.<p>ಸ್ಥಳೀಯ ಮಾರುಕಟ್ಟೆಯೂ ಇಲ್ಲ. ಶಾಲೆಗಳು ಪೂರ್ಣವಾಗಿ ಆರಂಭವಾಗಿದ್ದರೆ ಅನುಕೂಲವಾಗುತ್ತಿತ್ತು. ಈಗ ಮೂರು ವರ್ಷದ ಹಿಂದೆ ಮೂರೂವರೆ ಲಕ್ಷ ಲಾಭ ಬಂದಿತ್ತು. ಇದರಿಂದ ಮತ್ತಷ್ಟು ಬಂಡವಾಳ ಹೂಡಿದೆ. ಆದರೆ ಆ ಬಂಡವಾಳ ವಾಪಸ್ ಪಡೆಯಲು ಸಾಧ್ಯವಾಗಿಲ್ಲ ಎಂದು ನೋವು ತೋಡಿಕೊಂಡರು.</p>.<p>ಹಿಂದಿನ ವರ್ಷ ಲಾಕ್ಡೌನ್ ಸಮಯದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು ರಹದಾರಿಯಾಗಿದ್ದರು. ಹೊರರಾಜ್ಯಗಳಿಗೆ ಮತ್ತು ಸರಕು ಅಗತ್ಯವಿದ್ದವರನ್ನು ಕರೆ ತಂದು ರೈತರ ಜತೆ ಸಂಪರ್ಕಿಸುತ್ತಿದ್ದರು. ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೀರಾ ಎಂದರೆ ರಾಜಣ್ಣ ಅಸಮಾಧಾನ ವ್ಯಕ್ತಪಡಿಸುವರು.</p>.<p>‘ಯಾವ ಅಧಿಕಾರಿಗಳೂ ಬಂದಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಮಾರಾಟದ ಮಾರ್ಗ ಅಥವಾ ಯಾವುದೇ ಸಲಹೆಗಳನ್ನು ನೀಡಿಲ್ಲ’ ಎಂದು ಅಸಮಾಧಾನ ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಸೀಬೆ ಹಣ್ಣಿಗೆ ಬೆಲೆ ಮತ್ತು ಮಾರುಕಟ್ಟೆ ಇಲ್ಲದೆ ಕಂಗಾಲಾಗಿರುವ ತಾಲ್ಲೂಕಿನ ಚೊಕ್ಕಹಳ್ಳಿಯ ರೈತ ರಾಜಣ್ಣ ಹಣ್ಣುಗಳನ್ನು ಸೀಬೆ ಗಿಡಗಳ ಬುಡದಲ್ಲಿ ಪಾತಿ ಮಾಡಿ ಅವುಗಳನ್ನು ಮಣ್ಣಿಗೆ ಸೇರಿಸುತ್ತಿದ್ದಾರೆ. ಖರ್ಚು ಮಾಡಿದ ಬಂಡವಾಳವೂ ಅವರಿಗೆ ವಾಪಸಾಗದ ಸ್ಥಿತಿ ಎದುರಾಗಿದೆ.</p>.<p>ಎರಡು ದಿನಗಳ ಹಿಂದೆ ತಲಾ 22 ಕೆ.ಜಿಯ 32 ಕ್ರೇಟ್ ಸೀಬೆ ಹಣ್ಣನ್ನು ಮಾರಾಟಕ್ಕೆ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಸರಕನ್ನು ಯಾರೂ ಖರೀದಿಸಿಲ್ಲ. ಅಂತಿಮವಾಗಿ ರಸ್ತೆ ಬದಿಯ ವ್ಯಾಪಾರಿಗಳಿಗೆ ಎಲ್ಲ ಹಣ್ಣನ್ನು ₹ 2 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.</p>.<p>‘ವಾಹನದ ಬಾಡಿಗೆಯೇ ₹ 2,500. ಕನಿಷ್ಠ ಬಾಡಿಗೆ ಹಣವೂ ಬರಲಿಲ್ಲ. ಹಣ್ಣು ಕೀಳಲು 12 ಕೂಲಿ ಕಾರ್ಮಿಕರಿಗೆ ತಲಾ ₹ 250 ನೀಡಿದ್ದೆ. ಎಲ್ಲವೂ ನಷ್ಟವಾಯಿತು. ಇದರಿಂದ ಬೇಸರಗೊಂಡು ಹಣ್ಣನ್ನು ಕೀಳಿಸಿ ಗಿಡಗಳ ಬುಡಕ್ಕೆ ಹಾಕಿಸುತ್ತಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸುವರು ರಾಜಣ್ಣ. ಅವರ ಒಂದೂವರೆ ಎಕರೆ ಜಮೀನಿನಲ್ಲಿ ಅಲಹಾಬಾದ್ ತಳಿಯ ಮುನ್ನೂರು ಸೀಬೆ|<br />ಮರಗಳಿವೆ.</p>.<p>ಔಷಧಿ, ಕೆಮ್ಮಣ್ಣ, ಕಡಲೇಕಾಯಿ ಹಿಂಡಿ, ಬೇವಿನ ಹಿಂಡಿಗೆ ಹಣ ಖರ್ಚು ಮಾಡಿದ್ದೆ. ಕಳೆದ ವರ್ಷವೂ ಕೊರೊನಾ ಕಾರಣದಿಂದ ನಷ್ಟವಾಯಿತು. ಈ ಬಾರಿಗೂ ಇದೇ ಕಥೆ. ಹೀಗೆ ಆದರೆ ಗಿಡೆಗಳನ್ನೇ ಕೀಳಿಸುವೆ ಎನ್ನುತ್ತಾರೆ ಅವರು.</p>.<p>ಸ್ಥಳೀಯ ಮಾರುಕಟ್ಟೆಯೂ ಇಲ್ಲ. ಶಾಲೆಗಳು ಪೂರ್ಣವಾಗಿ ಆರಂಭವಾಗಿದ್ದರೆ ಅನುಕೂಲವಾಗುತ್ತಿತ್ತು. ಈಗ ಮೂರು ವರ್ಷದ ಹಿಂದೆ ಮೂರೂವರೆ ಲಕ್ಷ ಲಾಭ ಬಂದಿತ್ತು. ಇದರಿಂದ ಮತ್ತಷ್ಟು ಬಂಡವಾಳ ಹೂಡಿದೆ. ಆದರೆ ಆ ಬಂಡವಾಳ ವಾಪಸ್ ಪಡೆಯಲು ಸಾಧ್ಯವಾಗಿಲ್ಲ ಎಂದು ನೋವು ತೋಡಿಕೊಂಡರು.</p>.<p>ಹಿಂದಿನ ವರ್ಷ ಲಾಕ್ಡೌನ್ ಸಮಯದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು ರಹದಾರಿಯಾಗಿದ್ದರು. ಹೊರರಾಜ್ಯಗಳಿಗೆ ಮತ್ತು ಸರಕು ಅಗತ್ಯವಿದ್ದವರನ್ನು ಕರೆ ತಂದು ರೈತರ ಜತೆ ಸಂಪರ್ಕಿಸುತ್ತಿದ್ದರು. ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೀರಾ ಎಂದರೆ ರಾಜಣ್ಣ ಅಸಮಾಧಾನ ವ್ಯಕ್ತಪಡಿಸುವರು.</p>.<p>‘ಯಾವ ಅಧಿಕಾರಿಗಳೂ ಬಂದಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಮಾರಾಟದ ಮಾರ್ಗ ಅಥವಾ ಯಾವುದೇ ಸಲಹೆಗಳನ್ನು ನೀಡಿಲ್ಲ’ ಎಂದು ಅಸಮಾಧಾನ ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>