ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಆಚರಣೆಗಳು ಭಾವೈಕ್ಯ ಮೂಡಿಸಲಿ

Last Updated 3 ಸೆಪ್ಟೆಂಬರ್ 2020, 8:32 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ತೊಂಡೇಬಾವಿ ‌ಹೋಬಳಿಯ ಹುಸೆನ್‌ಪುರದಲ್ಲಿ ಆಯೋಜಿಸಿದ್ದ ‌ಬಾಬಯ್ಯ ಹಬ್ಬದ ಆಚರಣೆಯಲ್ಲಿ ಕೆಎಚ್‌ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಅವರು, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಗ್ರಾಮಗಳಲ್ಲಿ ಮುಸ್ಲಿಂ ಮತ್ತು ಹಿಂದೂಗಳು ಶ್ರದ್ಧಾಭಕ್ತಿಯಿಂದ ಆಚರಿಸುವ ಈ ಹಬ್ಬವು ಜನರಲ್ಲಿ ಸಾಮರಸ್ಯ ‌ಮತ್ತು ಭಾವೈಕ್ಯ ಬೆಳೆಸಲು ಸಹಕಾರಿಯಾಗುತ್ತದೆ. ಇಂತಹ ಧಾರ್ಮಿಕ ಆಚರಣೆಗಳು‌ ಗ್ರಾಮದಲ್ಲಿ ನಡೆಯುವುದರಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು ಮಾತನಾಡಿ, ಗ್ರಾಮೀಣ ನಿತ್ಯದ ಶ್ರಮದ ಕಾರ್ಯಗಳ‌ ನಡುವೆ ಆಚರಿ ಸುವ ಈ ಧಾರ್ಮಿಕ‌ ಕ್ರಿಯೆಗಳು ನಿಜಕ್ಕೂ ಭಾವನಾತ್ಮಕ ಸಂಬಂಧಗಳನ್ನು ಮೂಡಿಸುತ್ತವೆ. ನಂಬಿಕೆ ಮತ್ತು‌ ವಿಶ್ವಾಸಗಳು ಗಟ್ಟಿಗೊಳ್ಳಲು ಆಚರಣೆಗಳು ಸಹಕಾರಿಯಾಗುತ್ತವೆ. ಇಂತಹ ಧಾರ್ಮಿಕ ಆಚರಣೆಗಳಿಗೆ ಪುಟ್ಟಸ್ವಾಮಿಗೌಡ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.

ಮುಖಂಡರಾದ ‌ಪಿ.ಎನ್.ಶಿವಶಂಕರರೆಡ್ಡಿ, ಗಂಗಾಚಾರಿ, ಶ್ರೀಕುಮಾರ್, ಶಿವಶಂಕರ್, ರಾಮಕೃಷ್ಣ, ಆರ್.ಎನ್.ವೆಂಕಟೇಶರೆಡ್ಡಿ, ನಾಗಾರ್ಜುನ, ನಾಗರಾಜು ‌ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT