ಕನಂಪಲ್ಲಿ ನಿವಾಸಿ ನಿವೃತ್ತ ಎಎಸ್ಐ ಶಂಕರರೆಡ್ಡಿ ಮತ್ತು ಉಮಾದೇವಿ ದಂಪತಿ ಪುತ್ರ ಮೋಹನ್ ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದರು. ವಿದ್ಯಾರ್ಥಿದೆಸೆಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಕ್ರೀಡಾಕೂಟಗಳಲ್ಲಿ ಮತ್ತು ರಾಜ್ಯಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಶಾಲಾ ದಿನಗಳ ಬಳಿಕ ಕ್ರೀಡಾ ಚಟುವಟಿಕೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಬಾಲ್ಯದ ಕ್ರೀಡಾ ದಿನಗಳನ್ನು ನೆನದು 15 ವರ್ಷದ ಬಳಿಕ ಮತ್ತೆ ಕ್ರೀಡೆಯಲ್ಲಿ ತೊಡಗಿಸಿಕೊಂಡು, ಅಭ್ಯಾಸ ಆರಂಭಿಸಿದರು.