<p><strong>ಚಿಂತಾಮಣಿ</strong>: ತಾಲ್ಲೂಕಿನ ಮುರುಗಮಲೆಯಲ್ಲಿ ಸೋಮವಾರ ನಡೆದ ಅಮ್ಮಾಜಾನ್ ಬಾವಾಜಾನ್ ದರ್ಗಾದ ಉರುಸ್ನಲ್ಲಿ ವಿವಿಧ ರಾಜ್ಯಗಳಿಂದ ಬಂದಿದ್ದ ಲಿಂಗತ್ವ ಅಲ್ಪಸಂಖ್ಯಾತರು ದರ್ಗಾಕ್ಕೆ ವಿಶೇಷ ಚಾದರ್ ಹೊದಿಸಿ, ಗಂಧದ ಅರ್ಪಣೆ ಮಾಡಿದರು. </p>.<p>ಲಿಂಗತ್ವ ಅಲ್ಪಸಂಖ್ಯಾತರ ಮುಖ್ಯಸ್ಥೆ ಮುಂಬೈ ಗುಲಾಂ ಮೊಯಿನುದ್ದೀನ್ ಅಮ್ಮಾಜಿ ಗಂಧದ ಉತ್ಸವದ ನೇತೃತ್ವ ವಹಿಸಿದ್ದರು. </p>.<p>ಗಂಧೋತ್ಸವದ 2ನೇ ದಿನವಾದ ಶನಿವಾರವೂ ದರ್ಗಾದಲ್ಲಿ ವಿಶೇಷ ಪೂಜೆ, ಅನ್ನದಾನ, ವಸ್ತ್ರದಾನ ಕಾರ್ಯಕ್ರಮಗಳು ನಡೆದವು. ಡೋಲು ಬಾರಿಸುವುದು, ಹಾಡುವುದು, ನೃತ್ಯದ ಕಾರ್ಯಕ್ರಮಗಳು ಜನರಿಗೆ ಮನೋರಂಜನೆ ಒದಗಿಸಿದವು. </p>.<p>ಲಿಂಗತ್ವ ಅಲ್ಪಸಂಖ್ಯಾತರ ತಂಡದ ಗುಲಾಂ ಮೊಯಿನುದ್ದೀನ್ ಮಾತನಾಡಿ, ಸುಮಾರು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರೆಲ್ಲರೂ ಒಟ್ಟುಗೂಡಿ ಅಮ್ಮಾಜಾನ್ ಬಾಬಾಜಾನ್ ಅವರ ದರ್ಗಾಗೆ ಚಾದರ್ ಅರ್ಪಿಸಿ ಗಂಧ ಅರ್ಪಣೆ ಮಾಡುತ್ತಿದ್ದೇವೆ. ಅವರ ಆಶೀರ್ವಾದ ನಮ್ಮ ಮೇಲಿದೆ’ ಎಂದು ಹೇಳಿದರು.</p>.<p>‘ಪ್ರತಿವರ್ಷ ನಾವು ಹೆಚ್ಚಿನ ಸೇವೆ ಸಲ್ಲಿಸಲು ಆಗಮಿಸುತ್ತೇವೆ. ಒಳ್ಳೆಯ ಮಳೆ-ಬೆಳೆಯಾಗಿ ಜನರು ಸುಖ-ಸಂತೋಷದಿಂದ ಜೀವನ ನಡೆಸಲಿ’ ಎಂದು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ತಾಲ್ಲೂಕಿನ ಮುರುಗಮಲೆಯಲ್ಲಿ ಸೋಮವಾರ ನಡೆದ ಅಮ್ಮಾಜಾನ್ ಬಾವಾಜಾನ್ ದರ್ಗಾದ ಉರುಸ್ನಲ್ಲಿ ವಿವಿಧ ರಾಜ್ಯಗಳಿಂದ ಬಂದಿದ್ದ ಲಿಂಗತ್ವ ಅಲ್ಪಸಂಖ್ಯಾತರು ದರ್ಗಾಕ್ಕೆ ವಿಶೇಷ ಚಾದರ್ ಹೊದಿಸಿ, ಗಂಧದ ಅರ್ಪಣೆ ಮಾಡಿದರು. </p>.<p>ಲಿಂಗತ್ವ ಅಲ್ಪಸಂಖ್ಯಾತರ ಮುಖ್ಯಸ್ಥೆ ಮುಂಬೈ ಗುಲಾಂ ಮೊಯಿನುದ್ದೀನ್ ಅಮ್ಮಾಜಿ ಗಂಧದ ಉತ್ಸವದ ನೇತೃತ್ವ ವಹಿಸಿದ್ದರು. </p>.<p>ಗಂಧೋತ್ಸವದ 2ನೇ ದಿನವಾದ ಶನಿವಾರವೂ ದರ್ಗಾದಲ್ಲಿ ವಿಶೇಷ ಪೂಜೆ, ಅನ್ನದಾನ, ವಸ್ತ್ರದಾನ ಕಾರ್ಯಕ್ರಮಗಳು ನಡೆದವು. ಡೋಲು ಬಾರಿಸುವುದು, ಹಾಡುವುದು, ನೃತ್ಯದ ಕಾರ್ಯಕ್ರಮಗಳು ಜನರಿಗೆ ಮನೋರಂಜನೆ ಒದಗಿಸಿದವು. </p>.<p>ಲಿಂಗತ್ವ ಅಲ್ಪಸಂಖ್ಯಾತರ ತಂಡದ ಗುಲಾಂ ಮೊಯಿನುದ್ದೀನ್ ಮಾತನಾಡಿ, ಸುಮಾರು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರೆಲ್ಲರೂ ಒಟ್ಟುಗೂಡಿ ಅಮ್ಮಾಜಾನ್ ಬಾಬಾಜಾನ್ ಅವರ ದರ್ಗಾಗೆ ಚಾದರ್ ಅರ್ಪಿಸಿ ಗಂಧ ಅರ್ಪಣೆ ಮಾಡುತ್ತಿದ್ದೇವೆ. ಅವರ ಆಶೀರ್ವಾದ ನಮ್ಮ ಮೇಲಿದೆ’ ಎಂದು ಹೇಳಿದರು.</p>.<p>‘ಪ್ರತಿವರ್ಷ ನಾವು ಹೆಚ್ಚಿನ ಸೇವೆ ಸಲ್ಲಿಸಲು ಆಗಮಿಸುತ್ತೇವೆ. ಒಳ್ಳೆಯ ಮಳೆ-ಬೆಳೆಯಾಗಿ ಜನರು ಸುಖ-ಸಂತೋಷದಿಂದ ಜೀವನ ನಡೆಸಲಿ’ ಎಂದು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>