<p><strong>ಚಿಕ್ಕಬಳ್ಳಾಪುರ</strong>: ತಾಲ್ಲಕಿನ ಐತಿಹಾಸಿಕ ನಂದಿಗಿರಿಧಾಮ ಈಗ ಪ್ರವಾಸಿಗರನ್ನು ಬರ ಸೆಳೆಯುತ್ತಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಗಿರಿಧಾಮಕ್ಕೆ ಮಂಜು ಮುತ್ತಿಕ್ಕುತ್ತದೆ. ಪ್ರಕೃತಿ ಪ್ರಿಯರು, ಚಾರಣ ಪ್ರಿಯರು, ಪ್ರವಾಸಿಗರು ಸಾಮಾನ್ಯ ದಿನಗಳಿಗಿಂತ ಚಳಿಗಾಲದಲ್ಲಿ ಗಿರಿಧಾಮಕ್ಕೆ ಹೆಚ್ಚು ಭೇಟಿ ನೀಡುತ್ತಾರೆ. </p>.<p>ಅದೂ ಬೆಳಂ ಬೆಳಿಗ್ಗೆಯೇ. ಗಿರಿಧಾಮದ ಆರಂಭದಿಂದ ಅಂತಿಮ ಹಂತದವರೆಗೂ ಕಾಡುಗಳಿಗೆ, ಗಿರಿ ಶಿಖರಗಳಿಗೆ ಮಂಜು ಮುತ್ತಿಕ್ಕಿರುತ್ತದೆ. ತೊಟಕ್... ತೊಟಕ್... ಎಂದು ಬೀಳುವ ಮಂಜಿನ ಹನಿಗಳಲ್ಲಿ ಮೀಯಲು ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಿರುತ್ತಾರೆ. ಓಡುವ ಮೋಡಗಳೊಳಗೆ ಸೇರಿ ಆಹ್ಲಾದ ಅನುಭವಿಸುವರು.</p>.<p>ಬೆಟ್ಟ, ಕಾಡುಗಳನ್ನು ತಬ್ಬಿದ ಮಂಜಿನ ಹನಿಗಳು, ಓಡುವ ಮೋಡಗಳನ್ನು ಕಂಡು ಪುಳಕಿತರಾಗುತ್ತಾರೆ. ಬೆಳಿಗ್ಗೆ 11ರವರೆಗೂ ಮಂಜು ಬೆಟ್ಟವನ್ನು ಆವರಿಸಿರುತ್ತದೆ. ಬಿಸಿಲು ಅಡರಿದಂತೆ ಕರಗುತ್ತದೆ. ಅಷ್ಟರಲ್ಲಿ ಪ್ರವಾಸಿಗರ ಸಂಖ್ಯೆಯೂ ಕರಗುತ್ತದೆ. </p>.<p>ಈ ಚಳಿಗಾಲ ಹಾಗೂ ಮಂಜಿನಲ್ಲಿ ನಂದಿಗಿರಿಧಾಮದ ಮೀಯುವ ಸಮಯದಲ್ಲಿ ನಂದಿಗಿರಿಧಾಮವನ್ನು ನೋಡುವ ಸೊಗಬಗೇ ಚೆಂದ. ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿ ಇರುವ ಕಾರಣ ಬೆಂಗಳೂರಿಗರೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ</p>.<p>‘ಪ್ರಜಾವಾಣಿ’ ಬೆಂಗಳೂರು ಕಚೇರಿಯ ಛಾಯಾಗ್ರಹಕ ಎಂ.ಎಸ್.ಮಂಜುನಾಥ್ ಬೆಳ್ಳಂ ಬೆಳಿಗ್ಗೆಯ ನಂದಿಯ ಮೂಡ್ಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈ ಚಿತ್ರಗಳು ಗಿರಿಧಾಮದ ಸೌಂದರ್ಯ ವೈಭವವನ್ನು ಸಾರುತ್ತವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ತಾಲ್ಲಕಿನ ಐತಿಹಾಸಿಕ ನಂದಿಗಿರಿಧಾಮ ಈಗ ಪ್ರವಾಸಿಗರನ್ನು ಬರ ಸೆಳೆಯುತ್ತಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಗಿರಿಧಾಮಕ್ಕೆ ಮಂಜು ಮುತ್ತಿಕ್ಕುತ್ತದೆ. ಪ್ರಕೃತಿ ಪ್ರಿಯರು, ಚಾರಣ ಪ್ರಿಯರು, ಪ್ರವಾಸಿಗರು ಸಾಮಾನ್ಯ ದಿನಗಳಿಗಿಂತ ಚಳಿಗಾಲದಲ್ಲಿ ಗಿರಿಧಾಮಕ್ಕೆ ಹೆಚ್ಚು ಭೇಟಿ ನೀಡುತ್ತಾರೆ. </p>.<p>ಅದೂ ಬೆಳಂ ಬೆಳಿಗ್ಗೆಯೇ. ಗಿರಿಧಾಮದ ಆರಂಭದಿಂದ ಅಂತಿಮ ಹಂತದವರೆಗೂ ಕಾಡುಗಳಿಗೆ, ಗಿರಿ ಶಿಖರಗಳಿಗೆ ಮಂಜು ಮುತ್ತಿಕ್ಕಿರುತ್ತದೆ. ತೊಟಕ್... ತೊಟಕ್... ಎಂದು ಬೀಳುವ ಮಂಜಿನ ಹನಿಗಳಲ್ಲಿ ಮೀಯಲು ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಿರುತ್ತಾರೆ. ಓಡುವ ಮೋಡಗಳೊಳಗೆ ಸೇರಿ ಆಹ್ಲಾದ ಅನುಭವಿಸುವರು.</p>.<p>ಬೆಟ್ಟ, ಕಾಡುಗಳನ್ನು ತಬ್ಬಿದ ಮಂಜಿನ ಹನಿಗಳು, ಓಡುವ ಮೋಡಗಳನ್ನು ಕಂಡು ಪುಳಕಿತರಾಗುತ್ತಾರೆ. ಬೆಳಿಗ್ಗೆ 11ರವರೆಗೂ ಮಂಜು ಬೆಟ್ಟವನ್ನು ಆವರಿಸಿರುತ್ತದೆ. ಬಿಸಿಲು ಅಡರಿದಂತೆ ಕರಗುತ್ತದೆ. ಅಷ್ಟರಲ್ಲಿ ಪ್ರವಾಸಿಗರ ಸಂಖ್ಯೆಯೂ ಕರಗುತ್ತದೆ. </p>.<p>ಈ ಚಳಿಗಾಲ ಹಾಗೂ ಮಂಜಿನಲ್ಲಿ ನಂದಿಗಿರಿಧಾಮದ ಮೀಯುವ ಸಮಯದಲ್ಲಿ ನಂದಿಗಿರಿಧಾಮವನ್ನು ನೋಡುವ ಸೊಗಬಗೇ ಚೆಂದ. ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿ ಇರುವ ಕಾರಣ ಬೆಂಗಳೂರಿಗರೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ</p>.<p>‘ಪ್ರಜಾವಾಣಿ’ ಬೆಂಗಳೂರು ಕಚೇರಿಯ ಛಾಯಾಗ್ರಹಕ ಎಂ.ಎಸ್.ಮಂಜುನಾಥ್ ಬೆಳ್ಳಂ ಬೆಳಿಗ್ಗೆಯ ನಂದಿಯ ಮೂಡ್ಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈ ಚಿತ್ರಗಳು ಗಿರಿಧಾಮದ ಸೌಂದರ್ಯ ವೈಭವವನ್ನು ಸಾರುತ್ತವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>