<p><strong>ಗುಡಿಬಂಡೆ</strong>: ತಾಲ್ಲೂಕಿನಲ್ಲಿ ಸ್ಮಶಾನಗಳಿವೆ. ಆದರೆ, ಇವುಗಳಲ್ಲಿ ಕನಿಷ್ಠ ಮಟ್ಟದಲ್ಲಿಯೂ ಮೂಲಸೌಲಭ್ಯಗಳು ಇಲ್ಲ.ತಾಲ್ಲೂಕಿನಲ್ಲಿ ಒಟ್ಟು 105 ಗ್ರಾಮಗಳಿದ್ದು, ಈ ಪೈಕಿ 95 ಗ್ರಾಮಗಳಲ್ಲಿ ಸ್ಮಶಾನಗಳಿವೆ.10 ಸಾವಿರ ಜನಸಂಖ್ಯೆಯುಳ್ಳ ಗುಡಿಬಂಡೆ ಪಟ್ಟಣದಲ್ಲಿಯೂ 16.20 ಎಕರೆಯಲ್ಲಿ ಸ್ಮಶಾನ ಇದೆ.</p>.<p>1 ಸಾವಿರ ಜನಸಂಖ್ಯೆಗೆ 20 ಗುಂಟೆ ಪ್ರಕಾರ ಸ್ಮಶಾನಗಳಿಗೆ ಜಮೀನು ಮಂಜೂರಾಗಿದೆ. ಈ ಪ್ರಕಾರ ಗ್ರಾಮಾಂತರ ಪ್ರದೇಶದ ಸ್ಮಶಾನಕ್ಕೆ ಎಂದು ಒಟ್ಟು 89 ಎಕರೆ ಮತ್ತು ಪಟ್ಟಣಕ್ಕೆ 16.20 ಎಕರೆ ಸ್ಮಶಾನದ ಜಾಗವಿದೆ. ಹೀಗಿದ್ದರೂ ಶೇ 30ರಷ್ಟು ಸ್ಮಶಾನಗಳು ಮಾತ್ರ ಅಭಿವೃದ್ಧಿ ಕಂಡಿವೆ.</p>.<p><strong>ಎಲ್ಲೆಲ್ಲಿ ಸ್ಮಶಾನ:</strong>ಪಟ್ಟಣದ ಸಂತೆ ಮೈದಾನದಲ್ಲಿ 20 ಗುಂಟೆ, ಮುಖ್ಯರಸ್ತೆ ಪಕ್ಕದಲ್ಲಿ 3 ಎಕರೆ, ವಾಪಸಂದ್ರದ ಬಳಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸ್ಮಶಾನವಿದೆ. 3 ಎಕರೆಯಲ್ಲಿರುವ ಮುಸ್ಲಿಮರ ಖಬರ್ಸ್ತಾನ, ಸಂತೆ ಮೈದಾನ ಮತ್ತು ಬ್ರಾಹ್ಮಣರಿಗೆ ಮೀಸಲಾಗಿರುವ ಸ್ಮಶಾನದಲ್ಲಿ ಶವ ಸಂಸ್ಕಾರಗಳು ನಡೆಯುತ್ತಿವೆ. ಇಲ್ಲಿಯೂ ಸೌಲಭ್ಯಗಳು ಇಲ್ಲ.</p>.<p>ಸಂತೆ ಮೈದಾನದಲ್ಲಿನ 20 ಗುಂಟೆ ಜಾಗ 50 ವರ್ಷಗಳ ಹಿಂದೆ ಸ್ಮಶಾನಕ್ಕೆ ಮಂಜೂರಾಗಿತ್ತು. ಆಗ ಪಟ್ಟಣದ ಜನಸಂಖ್ಯೆ 2 ಸಾವಿರ ಇತ್ತು. ಈಗ 10 ಸಾವಿರ ಮೀರಿದೆ.ಈ ಸ್ಮಶಾನ ಗೋರಿಗಳಿಂದ ತುಂಬಿದೆ. ಈಗ ಜಾಗದ ಕೊರತೆ ಇದೆ. ಹಳೇ ಗೋರಿಗಳ ಮೇಲೆ ಹೊಸ ಗುಣಿ ತೆಗೆದು ಶವಗಳನ್ನು ಹೂಳಬೇಕಾದ ಸ್ಥಿತಿ ಇದೆ.</p>.<p>ವಾಪಸಂದ್ರ ಸರ್ವೆ ನಂ. 76ರಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಎಂದು 5 ಎಕರೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಒಟ್ಟು ಮೂರು ಎಕರೆ ಜಮೀನು ಮಂಜೂರಾಗಿದೆ. ಪಹಣಿಯಲ್ಲಿಯೂ ಸ್ಮಶಾನ ಎಂದು ನಮೂದಾಗಿದೆ. ಆದರೆ, ಇಲ್ಲಿ ಕೆಲವರು ಉಳುಮೆ ಮಾಡುತ್ತಿದ್ದು ಅವರಿಂದ ಜಮೀನನ್ನು ಸ್ವಾಧೀನಕ್ಕೆ ಅಧಿಕಾರಿಗಳು ತೆಗೆದು<br />ಕೊಂಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ</strong>: ತಾಲ್ಲೂಕಿನಲ್ಲಿ ಸ್ಮಶಾನಗಳಿವೆ. ಆದರೆ, ಇವುಗಳಲ್ಲಿ ಕನಿಷ್ಠ ಮಟ್ಟದಲ್ಲಿಯೂ ಮೂಲಸೌಲಭ್ಯಗಳು ಇಲ್ಲ.ತಾಲ್ಲೂಕಿನಲ್ಲಿ ಒಟ್ಟು 105 ಗ್ರಾಮಗಳಿದ್ದು, ಈ ಪೈಕಿ 95 ಗ್ರಾಮಗಳಲ್ಲಿ ಸ್ಮಶಾನಗಳಿವೆ.10 ಸಾವಿರ ಜನಸಂಖ್ಯೆಯುಳ್ಳ ಗುಡಿಬಂಡೆ ಪಟ್ಟಣದಲ್ಲಿಯೂ 16.20 ಎಕರೆಯಲ್ಲಿ ಸ್ಮಶಾನ ಇದೆ.</p>.<p>1 ಸಾವಿರ ಜನಸಂಖ್ಯೆಗೆ 20 ಗುಂಟೆ ಪ್ರಕಾರ ಸ್ಮಶಾನಗಳಿಗೆ ಜಮೀನು ಮಂಜೂರಾಗಿದೆ. ಈ ಪ್ರಕಾರ ಗ್ರಾಮಾಂತರ ಪ್ರದೇಶದ ಸ್ಮಶಾನಕ್ಕೆ ಎಂದು ಒಟ್ಟು 89 ಎಕರೆ ಮತ್ತು ಪಟ್ಟಣಕ್ಕೆ 16.20 ಎಕರೆ ಸ್ಮಶಾನದ ಜಾಗವಿದೆ. ಹೀಗಿದ್ದರೂ ಶೇ 30ರಷ್ಟು ಸ್ಮಶಾನಗಳು ಮಾತ್ರ ಅಭಿವೃದ್ಧಿ ಕಂಡಿವೆ.</p>.<p><strong>ಎಲ್ಲೆಲ್ಲಿ ಸ್ಮಶಾನ:</strong>ಪಟ್ಟಣದ ಸಂತೆ ಮೈದಾನದಲ್ಲಿ 20 ಗುಂಟೆ, ಮುಖ್ಯರಸ್ತೆ ಪಕ್ಕದಲ್ಲಿ 3 ಎಕರೆ, ವಾಪಸಂದ್ರದ ಬಳಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸ್ಮಶಾನವಿದೆ. 3 ಎಕರೆಯಲ್ಲಿರುವ ಮುಸ್ಲಿಮರ ಖಬರ್ಸ್ತಾನ, ಸಂತೆ ಮೈದಾನ ಮತ್ತು ಬ್ರಾಹ್ಮಣರಿಗೆ ಮೀಸಲಾಗಿರುವ ಸ್ಮಶಾನದಲ್ಲಿ ಶವ ಸಂಸ್ಕಾರಗಳು ನಡೆಯುತ್ತಿವೆ. ಇಲ್ಲಿಯೂ ಸೌಲಭ್ಯಗಳು ಇಲ್ಲ.</p>.<p>ಸಂತೆ ಮೈದಾನದಲ್ಲಿನ 20 ಗುಂಟೆ ಜಾಗ 50 ವರ್ಷಗಳ ಹಿಂದೆ ಸ್ಮಶಾನಕ್ಕೆ ಮಂಜೂರಾಗಿತ್ತು. ಆಗ ಪಟ್ಟಣದ ಜನಸಂಖ್ಯೆ 2 ಸಾವಿರ ಇತ್ತು. ಈಗ 10 ಸಾವಿರ ಮೀರಿದೆ.ಈ ಸ್ಮಶಾನ ಗೋರಿಗಳಿಂದ ತುಂಬಿದೆ. ಈಗ ಜಾಗದ ಕೊರತೆ ಇದೆ. ಹಳೇ ಗೋರಿಗಳ ಮೇಲೆ ಹೊಸ ಗುಣಿ ತೆಗೆದು ಶವಗಳನ್ನು ಹೂಳಬೇಕಾದ ಸ್ಥಿತಿ ಇದೆ.</p>.<p>ವಾಪಸಂದ್ರ ಸರ್ವೆ ನಂ. 76ರಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಎಂದು 5 ಎಕರೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಒಟ್ಟು ಮೂರು ಎಕರೆ ಜಮೀನು ಮಂಜೂರಾಗಿದೆ. ಪಹಣಿಯಲ್ಲಿಯೂ ಸ್ಮಶಾನ ಎಂದು ನಮೂದಾಗಿದೆ. ಆದರೆ, ಇಲ್ಲಿ ಕೆಲವರು ಉಳುಮೆ ಮಾಡುತ್ತಿದ್ದು ಅವರಿಂದ ಜಮೀನನ್ನು ಸ್ವಾಧೀನಕ್ಕೆ ಅಧಿಕಾರಿಗಳು ತೆಗೆದು<br />ಕೊಂಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>