ಚಿಂತಾಮಣಿ ಮಹಿಳಾ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು ಮಾತನಾಡಿ, ‘ನಮ್ಮ ಪೂರ್ವಿಕರು ದೇವಾಲಯ, ಗುಡಿ ಗೋಪುರ, ಕೆರೆ, ಕಾಲುವೆ, ಕಟ್ಟೆಗಳನ್ನು ಈಗಿನ ಜನರಿಗೆ ಹಾಗೂ ಮುಂದಿನ ಯುವ ಪೀಳಿಗೆಯವರಿಗೆ ಬಳುವಳಿಯಾಗಿ ನೀಡಿದ್ದಾರೆ. ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಸಾಧನೆ ಮಾಡಬೇಕು. ಇಲ್ಲವಾದರೆ ಬದುಕಿದ್ದು ಸತ್ತಂತೆ. ಸಿದ್ದರಾಮೇಶ್ವರರ ಆದರ್ಶಗಳನ್ನು ಪಾಲಿಸುವುದು ಎಂದರೆ ಒಳ್ಳೆಯ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದರ್ಥ’ ಎಂದು ಹೇಳಿದರು.