<p><strong>ಚಿಕ್ಕಬಳ್ಳಾಪುರ:</strong> ನಗರದ ಜಿಲ್ಲಾ ಆಸ್ಪತ್ರೆ ಬಳಿಯ ಮನೆಯ ಮಹಡಿಯಲ್ಲಿದ್ದ ಪಾರಿವಾಳಗಳನ್ನು ಹಿಡಿಯುವ ವಿಚಾರದಲ್ಲಿ ಶನಿವಾರ ಘರ್ಷಣೆ ಉಂಟಾಗಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ವಿಚಾರ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳವರೆಗೂ ಮುಟ್ಟಿದೆ ಎನ್ನಲಾಗಿದೆ.</p>.<p>ಭಾಸ್ಕರ್ ಎಂಬುವರ ಪಕ್ಕದ ಮನೆಯವರು ಪಾರಿವಾಳಗಳನ್ನು ಸಾಕಿದ್ದರು. ಅವರು ಮನೆ ಖಾಲಿ ಮಾಡಿದರೂ ಪಾರಿವಾಳಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಈ ಪಾರಿವಾಳಗಳನ್ನು ಹಿಡಿಯಲು ದರ್ಗಾ ಮೊಹಲ್ಲಾದ ಕೆಲವು ಯುವಕರು ಆಗಾಗ್ಗೆ ಪ್ರಯತ್ನಿಸುತ್ತಿದ್ದರು. </p>.<p>ಶನಿವಾರ ಪಕ್ಕದ ಮನೆಯ ಮಹಡಿ ಹತ್ತಿ ಅಲ್ಲಿಂದ ಭಾಸ್ಕರ್ ಅವರ ಮನೆಯ ಮಹಡಿಗೆ ಬಂದು ಯುವಕನೊಬ್ಬ ಪಾರಿವಾಳ ಹಿಡಿಯಲು ಮುಂದಾಗಿದ್ದಾನೆ. ಈ ವೇಳೆ ಆತ ಬಿದಿದ್ದಾನೆ. ಭಾಸ್ಕರ್ ಈ ವಿಚಾರವಾಗಿ ಯುವಕನಿಗೆ ಬುದ್ಧಿ ಹೇಳಿದ್ದಾರೆ.</p>.<p>ಸ್ವಲ್ಪ ಸಮಯದ ನಂತರ ದರ್ಗಾ ಮೊಹಲ್ಲಾದ ಮಹಿಳೆಯರು, ಯುವಕರ ಗುಂಪು ಭಾಸ್ಕರ್ ಅವರ ಅಂಗಡಿಯ ಬಳಿ ಬಂದು ಜಗಳವಾಡಿದೆ. ಭಾಸ್ಕರ್ ಮತ್ತು ಅವರ ಸಹೋದರ ಮೇಲೆ ಹಲ್ಲೆ ನಡೆಸಿದೆ. ಭಾಸ್ಕರ್ ಈ ಸಂಬಂಧ ನಗರ ಠಾಣೆಗೆ ದೂರು ನೀಡಿದ್ದಾರೆ.</p>.<p>ಈ ಕುರಿತು ಎರಡೂ ಕಡೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ನಗರದ ಜಿಲ್ಲಾ ಆಸ್ಪತ್ರೆ ಬಳಿಯ ಮನೆಯ ಮಹಡಿಯಲ್ಲಿದ್ದ ಪಾರಿವಾಳಗಳನ್ನು ಹಿಡಿಯುವ ವಿಚಾರದಲ್ಲಿ ಶನಿವಾರ ಘರ್ಷಣೆ ಉಂಟಾಗಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ವಿಚಾರ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳವರೆಗೂ ಮುಟ್ಟಿದೆ ಎನ್ನಲಾಗಿದೆ.</p>.<p>ಭಾಸ್ಕರ್ ಎಂಬುವರ ಪಕ್ಕದ ಮನೆಯವರು ಪಾರಿವಾಳಗಳನ್ನು ಸಾಕಿದ್ದರು. ಅವರು ಮನೆ ಖಾಲಿ ಮಾಡಿದರೂ ಪಾರಿವಾಳಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಈ ಪಾರಿವಾಳಗಳನ್ನು ಹಿಡಿಯಲು ದರ್ಗಾ ಮೊಹಲ್ಲಾದ ಕೆಲವು ಯುವಕರು ಆಗಾಗ್ಗೆ ಪ್ರಯತ್ನಿಸುತ್ತಿದ್ದರು. </p>.<p>ಶನಿವಾರ ಪಕ್ಕದ ಮನೆಯ ಮಹಡಿ ಹತ್ತಿ ಅಲ್ಲಿಂದ ಭಾಸ್ಕರ್ ಅವರ ಮನೆಯ ಮಹಡಿಗೆ ಬಂದು ಯುವಕನೊಬ್ಬ ಪಾರಿವಾಳ ಹಿಡಿಯಲು ಮುಂದಾಗಿದ್ದಾನೆ. ಈ ವೇಳೆ ಆತ ಬಿದಿದ್ದಾನೆ. ಭಾಸ್ಕರ್ ಈ ವಿಚಾರವಾಗಿ ಯುವಕನಿಗೆ ಬುದ್ಧಿ ಹೇಳಿದ್ದಾರೆ.</p>.<p>ಸ್ವಲ್ಪ ಸಮಯದ ನಂತರ ದರ್ಗಾ ಮೊಹಲ್ಲಾದ ಮಹಿಳೆಯರು, ಯುವಕರ ಗುಂಪು ಭಾಸ್ಕರ್ ಅವರ ಅಂಗಡಿಯ ಬಳಿ ಬಂದು ಜಗಳವಾಡಿದೆ. ಭಾಸ್ಕರ್ ಮತ್ತು ಅವರ ಸಹೋದರ ಮೇಲೆ ಹಲ್ಲೆ ನಡೆಸಿದೆ. ಭಾಸ್ಕರ್ ಈ ಸಂಬಂಧ ನಗರ ಠಾಣೆಗೆ ದೂರು ನೀಡಿದ್ದಾರೆ.</p>.<p>ಈ ಕುರಿತು ಎರಡೂ ಕಡೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>