<p><strong>ಮಂಚೇನಹಳ್ಳಿ:</strong> ತಾಲ್ಲೂಕಿನ ಕನಗಾನಕೊಪ್ಪದಲ್ಲಿ ನಡೆದ ಗುಂಡಿನ ದಾಳಿ ರಾಜಕೀಯಕ್ಕೆ ತಿರುಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಸದ ಡಾ. ಕೆ.ಸುಧಾಕರ್ ಹೇಳಿಕೆಯ ವಿಡಿಯೊ ಹರಿದಾಡುತ್ತಿದೆ. </p><p>ಇದಕ್ಕೆ ಪ್ರತಿಯಾಗಿ ಶಾಸಕರ ಬೆಂಬಲಿಗರು, ಈ ಗಣಿಯು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರ ಪತ್ನಿಗೆ ಸೇರಿದೆ ಎನ್ನುವ ಪೋಸ್ಟರ್ಗಳನ್ನು ಹರಿಬಿಟ್ಟಿದ್ದಾರೆ.</p>.ಚಿಕ್ಕಬಳ್ಳಾಪುರ: ದಾರಿ ವಿಚಾರವಾಗಿ ಗಲಾಟೆ; ರೈತನ ಮೇಲೆ ಗುಂಡು ಹಾರಿಸಿದ ಗಣಿ ಮಾಲೀಕ.<p>ಈ ಪೋಸ್ಟರ್ನಲ್ಲಿ ‘ಮಾನ್ಯ ಬಿಜೆಪಿ ಸಂಸದರೇ ಮಾನ್ಯ ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಅವರ ಮಂಚೇನಹಳ್ಳಿ ಕ್ರಷರ್ಗೆ ಅನುಮತಿ ಕೊಟ್ಟಿದ್ದು ತಾವೇ. 2021ರಲ್ಲಿ ತಾವೇ ಅನುಮತಿ ಕೊಟ್ಟು ಮಂಚೇನಹಳ್ಳಿ ಜನರಿಗೆ ದ್ರೋಹ ಮಾಡಿದ್ದೀರಿ’ ಎಂದಿದೆ. </p><p>ಅನುಮತಿ ಪತ್ರ, ಗುಂಡಿನ ದಾಳಿ ನಡೆಸಿದ ಸಕಲೇಶ್, ವೈ.ಎ.ನಾರಾಯಣಸ್ವಾಮಿ ಮತ್ತು ಡಾ.ಕೆ.ಸುಧಾಕರ್ ಜೊತೆ ಇರುವ ಚಿತ್ರಗಳು ಇದರಲ್ಲಿವೆ. </p><p>ಕ್ರಷರ್ ಮಾಲೀಕರು ಬಿಜೆಪಿಯವರು, ಇಂದು ಗುಂಡು ಹಾರಿಸಿದ ವ್ಯಕ್ತಿ ಕೂಡ ಬಿಜೆಪಿಯವರು. ಕ್ರಷರ್ಗೆ ಅನುಮತಿ ಕೊಟ್ಟವರು ಬಿಜೆಪಿಯವರು ಎಂದು ನಮೂದಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಚೇನಹಳ್ಳಿ:</strong> ತಾಲ್ಲೂಕಿನ ಕನಗಾನಕೊಪ್ಪದಲ್ಲಿ ನಡೆದ ಗುಂಡಿನ ದಾಳಿ ರಾಜಕೀಯಕ್ಕೆ ತಿರುಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಸದ ಡಾ. ಕೆ.ಸುಧಾಕರ್ ಹೇಳಿಕೆಯ ವಿಡಿಯೊ ಹರಿದಾಡುತ್ತಿದೆ. </p><p>ಇದಕ್ಕೆ ಪ್ರತಿಯಾಗಿ ಶಾಸಕರ ಬೆಂಬಲಿಗರು, ಈ ಗಣಿಯು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರ ಪತ್ನಿಗೆ ಸೇರಿದೆ ಎನ್ನುವ ಪೋಸ್ಟರ್ಗಳನ್ನು ಹರಿಬಿಟ್ಟಿದ್ದಾರೆ.</p>.ಚಿಕ್ಕಬಳ್ಳಾಪುರ: ದಾರಿ ವಿಚಾರವಾಗಿ ಗಲಾಟೆ; ರೈತನ ಮೇಲೆ ಗುಂಡು ಹಾರಿಸಿದ ಗಣಿ ಮಾಲೀಕ.<p>ಈ ಪೋಸ್ಟರ್ನಲ್ಲಿ ‘ಮಾನ್ಯ ಬಿಜೆಪಿ ಸಂಸದರೇ ಮಾನ್ಯ ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಅವರ ಮಂಚೇನಹಳ್ಳಿ ಕ್ರಷರ್ಗೆ ಅನುಮತಿ ಕೊಟ್ಟಿದ್ದು ತಾವೇ. 2021ರಲ್ಲಿ ತಾವೇ ಅನುಮತಿ ಕೊಟ್ಟು ಮಂಚೇನಹಳ್ಳಿ ಜನರಿಗೆ ದ್ರೋಹ ಮಾಡಿದ್ದೀರಿ’ ಎಂದಿದೆ. </p><p>ಅನುಮತಿ ಪತ್ರ, ಗುಂಡಿನ ದಾಳಿ ನಡೆಸಿದ ಸಕಲೇಶ್, ವೈ.ಎ.ನಾರಾಯಣಸ್ವಾಮಿ ಮತ್ತು ಡಾ.ಕೆ.ಸುಧಾಕರ್ ಜೊತೆ ಇರುವ ಚಿತ್ರಗಳು ಇದರಲ್ಲಿವೆ. </p><p>ಕ್ರಷರ್ ಮಾಲೀಕರು ಬಿಜೆಪಿಯವರು, ಇಂದು ಗುಂಡು ಹಾರಿಸಿದ ವ್ಯಕ್ತಿ ಕೂಡ ಬಿಜೆಪಿಯವರು. ಕ್ರಷರ್ಗೆ ಅನುಮತಿ ಕೊಟ್ಟವರು ಬಿಜೆಪಿಯವರು ಎಂದು ನಮೂದಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>