ಆದರೆ ಚಿಂತಾಮಣಿ, ಪಾತಪಾಳ್ಯ, ಜೂಲಪಾಳ್ಯ, ಚೇಳೂರು, ಗೂಳೂರು, ಚಾಕವೇಲು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಲು ಸರಿಯಾದ ಬಸ್ಗಳು ಇಲ್ಲವಾಗಿವೆ. ಸೈಲನ್ಸರ್, ಬ್ರೇಕ್, ಎಂಜಿನ್ ಸಮಸ್ಯೆಗಳಿಂದ ಬಸ್ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಗ್ರಾಮೀಣ ಭಾಗಗಳ ಪ್ರಯಾಣಿಕರಿಗೆ ಹಾಗೂ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗಿದೆ.