ಚಿಕ್ಕಬಳ್ಳಾಪುರ: 14 ವರ್ಷದ ಬಾಲಕಿಯ ಮೇಲೆ ಶಿಡ್ಲಘಟ್ಟದಲ್ಲಿ ಅತ್ಯಾಚಾರ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಸೇರಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಗಣೇಶ್, ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಶಿವಕುಮಾರ್, ಮನು ಮತ್ತು ಆನಂದ್ ಬಂಧಿತರು.
ಬೆಂಗಳೂರು ಮೂಲದ ಬಾಲಕಿಯ ತಾಯಿಯು ಪತಿಯಿಂದ ದೂರವಾಗಿದ್ದರು. ಆಂಧ್ರಪ್ರದೇಶದ ಗಣೇಶ್ ಜೊತೆ ತಾಲ್ಲೂಕಿನ ಗ್ರಾಮವೊಂದರಲ್ಲಿ ವಾಸಿಸುತ್ತಿದ್ದರು. ಈ ಇಬ್ಬರು ಸಹ ಅನೈತಿಕ ವ್ಯವಹಾರಗಳನ್ನು ನಡೆಸುತ್ತಿದ್ದರು. ಬಾಲಕಿಯನ್ನು ಸಹ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ನಿತ್ಯವೂ ಒಬ್ಬೊರ ಜೊತೆ ಕಳುಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಬಾಲಕಿಯು ಬೆಂಗಳೂರಿನಲ್ಲಿರುವ ತನ್ನ ಚಿಕ್ಕಮ್ಮನಿಗೆ ಮಾಹಿತಿ ನೀಡಿದ್ದಾಳೆ. ಅವರ ಚಿಕ್ಕಮ್ಮ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.