‘ತರಬೇತಿ ಕಾರ್ಯಗಾರದಲ್ಲಿ 28 ಅಧಿವೇಶನಗಳನ್ನು ನಡೆಸಲಾಗಿತ್ತು. ಇಲಾಖೆ ನಿಗದಿಪಡಿಸಿರುವಂತೆ ಒಂದು ಅಧಿವೇಶನಕ್ಕೆ ಸಂಪನ್ಮೂಲ ಉಪನ್ಯಾಸಕರಿಗೆ ₹2,100 ಸಂಭಾವನೆ, ₹500 ಪ್ರಯಾಣ ಭತ್ಯೆ ನೀಡಬೇಕು. ಅದಕ್ಕಾಗಿ ಇಲಾಖೆ ಮೊದಲ ಕಂತಿನಲ್ಲಿ ₹10,780, ಎರಡನೇ ಕಂತಿನಲ್ಲಿ ₹16,720 ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳು ಈವರೆಗೆ ಆ ಹಣವನ್ನು ಉಪನ್ಯಾಸಕರಿಗೆ ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.