<p>ಚೇಳೂರು: ಜಿ.ವಿ.ಶ್ರೀರಾಮರೆಡ್ಡಿ ಅವರು ಜಾತ್ಯತೀತ ಜನ ಮೆಚ್ಚಿದ ನಾಯಕ ಎಂದು ನೀರಾವರಿ ಹೋರಾಟಗಾರ ಡಾ.ಮಧುಸೀತಪ್ಪ ಹೇಳಿದರು.</p>.<p>ಚೇಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಶ್ರೀರಾಮರೆಡ್ಡಿ ಇಡೀ ಜೀವನವೇ ಕ್ಷೇತ್ರದ ದೀನ ದಲಿತರಿಗೆ ಕೃಷಿ ಕಾರ್ಮಿಕರ ಸಮಸ್ಯೆಗಳ ಪರ ಹೋರಾಟದಲ್ಲೇ ಕಳೆದರು. ಇಂತಹ ಅಪ್ರತಿಮ ನಾಯಕನ ನಿಧನವು ನಾಡಿಗೆ ಹೇಳಲಾಗದಷ್ಟು ನಷ್ಟವನ್ನುಂಟು ಮಾಡಿದೆ. ಅವರ ತತ್ವ ಸಿದ್ಧಾಂತಗಳು ಕ್ಷೇತ್ರದ ಅಭಿಮಾನಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದರು.</p>.<p>ಶಾಶ್ವತ ನೀರಾವರಿ ಹೋರಾಟ ನಾಯಕ ಇನ್ನಿಲ್ಲ. ಈ ಭಾಗದಲ್ಲಿ ಯಾವುದೇ ಕೋಮು ಗಲಭೆಗೆ ಅವಕಾಶ ಇಲ್ಲದೇ ಜಾತ್ಯತೀತ ಆದರ್ಶವಾದ ಕ್ಷೇತ್ರದಲ್ಲಿ ಇಂತಹ ನಾಯಕರನ್ನು ಚುನಾವಣೆಯಲ್ಲಿ ಕೇವಲ ಐದಾರು ಸಾವಿರ ಮತಗಳಲ್ಲಿ ಸೋಲಿಸಿದ್ದು ದುರಂತವೇ ಎನ್ನಬಹುದು. ಸದಾ ಕ್ಷೇತ್ರದ ಜನಪರ, ಕೃಷಿ ಕೂಲಿಕಾರ್ಮಿಕರ ಪರ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ನಾವುಕಳೆದುಕೊಂಡಿದ್ದೇವೆ ಎಂದರು.</p>.<p>ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್.ರಾಮಕೃಷ್ಣಾರೆಡ್ಡಿ ಮಾತನಾಡಿ, ಶ್ರೀರಾಮರೆಡ್ಡಿ ಕೇವಲ ಈ ಕ್ಷೇತ್ರದ ನಾಯಕ ಅಲ್ಲ, ಒಂದು ಶಕ್ತಿ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವನೆ ಹೊಂದಿದ್ದ ಶ್ರೀರಾಮರೆಡ್ಡಿ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ನಾಯಕರಾಗಿ, ಸಿಪಿಎಂ ಮುಖಂಡರಾಗಿ ಎರಡು ಬಾರಿ ಈ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಜನಪರವಾದ ಕೆಲಸಗಳನ್ನು ಮಾಡಿ, ಜನನಾಯಕರಾಗಿದ್ದರು. ಶಾಸಕರಾಗಿದ್ದಾಗ ವಿಧಾನಸಭಾ ಅಧಿವೇಶನದಲ್ಲಿ ಕ್ಷೇತ್ರದ ಶಾಶ್ವತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಿದ್ದರು. ನಾಡಿನ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತಿದ್ದಾರೆ<br />ಎಂದರು.</p>.<p>ಶ್ರೀರಾಮರೆಡ್ಡಿ ಅಧಿಕಾರಕ್ಕಾಗಿ ರಾಜಕೀಯ ಮಾಡುವ ಮನುಷ್ಯರಾಗಿರಲಿಲ್ಲ. ಈ ಭಾಗದ ಜನಸಾಮಾನ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿದವರು. ಅವರು ನಾಳಿನ ಚುನಾವಣೆಯ ಮತಪೆಟ್ಟಿಗೆಯ ಬಗ್ಗೆ ಯೋಚಿಸುತ್ತಿರಲಿಲ್ಲ, ಮತವನ್ನು ಮಾರಾಟಕ್ಕೆ ಇಡಬೇಡಿ ಎಂದು ಮತದಾರರ ಸ್ವಾಭಿಮಾನವನ್ನು ಬಡಿದೆಚ್ಚರಿಸಿದ ಧೀಮಂತರು ಎಂದರು.</p>.<p>ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚನ್ನರಾಯರಾಯಪ್ಪ, ಗೋಪಾಲಕೃಷ್ಣ, ಜಿ.ಎಂ.ರಾಮಕೃಷ್ಣಪ್ಪ, ಆರ್.ಚಂದ್ರಶೇಖರ ರೆಡ್ಡಿ, ವೆಂಕಟೇಶ್, ವೆಂಕಟೇಶ್, ರಘು, ಸುಬ್ಬಿರೆಡ್ಡಿ, ಬೈರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೇಳೂರು: ಜಿ.ವಿ.ಶ್ರೀರಾಮರೆಡ್ಡಿ ಅವರು ಜಾತ್ಯತೀತ ಜನ ಮೆಚ್ಚಿದ ನಾಯಕ ಎಂದು ನೀರಾವರಿ ಹೋರಾಟಗಾರ ಡಾ.ಮಧುಸೀತಪ್ಪ ಹೇಳಿದರು.</p>.<p>ಚೇಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಶ್ರೀರಾಮರೆಡ್ಡಿ ಇಡೀ ಜೀವನವೇ ಕ್ಷೇತ್ರದ ದೀನ ದಲಿತರಿಗೆ ಕೃಷಿ ಕಾರ್ಮಿಕರ ಸಮಸ್ಯೆಗಳ ಪರ ಹೋರಾಟದಲ್ಲೇ ಕಳೆದರು. ಇಂತಹ ಅಪ್ರತಿಮ ನಾಯಕನ ನಿಧನವು ನಾಡಿಗೆ ಹೇಳಲಾಗದಷ್ಟು ನಷ್ಟವನ್ನುಂಟು ಮಾಡಿದೆ. ಅವರ ತತ್ವ ಸಿದ್ಧಾಂತಗಳು ಕ್ಷೇತ್ರದ ಅಭಿಮಾನಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದರು.</p>.<p>ಶಾಶ್ವತ ನೀರಾವರಿ ಹೋರಾಟ ನಾಯಕ ಇನ್ನಿಲ್ಲ. ಈ ಭಾಗದಲ್ಲಿ ಯಾವುದೇ ಕೋಮು ಗಲಭೆಗೆ ಅವಕಾಶ ಇಲ್ಲದೇ ಜಾತ್ಯತೀತ ಆದರ್ಶವಾದ ಕ್ಷೇತ್ರದಲ್ಲಿ ಇಂತಹ ನಾಯಕರನ್ನು ಚುನಾವಣೆಯಲ್ಲಿ ಕೇವಲ ಐದಾರು ಸಾವಿರ ಮತಗಳಲ್ಲಿ ಸೋಲಿಸಿದ್ದು ದುರಂತವೇ ಎನ್ನಬಹುದು. ಸದಾ ಕ್ಷೇತ್ರದ ಜನಪರ, ಕೃಷಿ ಕೂಲಿಕಾರ್ಮಿಕರ ಪರ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ನಾವುಕಳೆದುಕೊಂಡಿದ್ದೇವೆ ಎಂದರು.</p>.<p>ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್.ರಾಮಕೃಷ್ಣಾರೆಡ್ಡಿ ಮಾತನಾಡಿ, ಶ್ರೀರಾಮರೆಡ್ಡಿ ಕೇವಲ ಈ ಕ್ಷೇತ್ರದ ನಾಯಕ ಅಲ್ಲ, ಒಂದು ಶಕ್ತಿ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವನೆ ಹೊಂದಿದ್ದ ಶ್ರೀರಾಮರೆಡ್ಡಿ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ನಾಯಕರಾಗಿ, ಸಿಪಿಎಂ ಮುಖಂಡರಾಗಿ ಎರಡು ಬಾರಿ ಈ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಜನಪರವಾದ ಕೆಲಸಗಳನ್ನು ಮಾಡಿ, ಜನನಾಯಕರಾಗಿದ್ದರು. ಶಾಸಕರಾಗಿದ್ದಾಗ ವಿಧಾನಸಭಾ ಅಧಿವೇಶನದಲ್ಲಿ ಕ್ಷೇತ್ರದ ಶಾಶ್ವತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಿದ್ದರು. ನಾಡಿನ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತಿದ್ದಾರೆ<br />ಎಂದರು.</p>.<p>ಶ್ರೀರಾಮರೆಡ್ಡಿ ಅಧಿಕಾರಕ್ಕಾಗಿ ರಾಜಕೀಯ ಮಾಡುವ ಮನುಷ್ಯರಾಗಿರಲಿಲ್ಲ. ಈ ಭಾಗದ ಜನಸಾಮಾನ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿದವರು. ಅವರು ನಾಳಿನ ಚುನಾವಣೆಯ ಮತಪೆಟ್ಟಿಗೆಯ ಬಗ್ಗೆ ಯೋಚಿಸುತ್ತಿರಲಿಲ್ಲ, ಮತವನ್ನು ಮಾರಾಟಕ್ಕೆ ಇಡಬೇಡಿ ಎಂದು ಮತದಾರರ ಸ್ವಾಭಿಮಾನವನ್ನು ಬಡಿದೆಚ್ಚರಿಸಿದ ಧೀಮಂತರು ಎಂದರು.</p>.<p>ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚನ್ನರಾಯರಾಯಪ್ಪ, ಗೋಪಾಲಕೃಷ್ಣ, ಜಿ.ಎಂ.ರಾಮಕೃಷ್ಣಪ್ಪ, ಆರ್.ಚಂದ್ರಶೇಖರ ರೆಡ್ಡಿ, ವೆಂಕಟೇಶ್, ವೆಂಕಟೇಶ್, ರಘು, ಸುಬ್ಬಿರೆಡ್ಡಿ, ಬೈರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>