ಕ್ರೀಡಾಂಗಣಕ್ಕೆ ಕಾಯಕಲ್ಪ ಅಗತ್ಯ ಜಿಲ್ಲಾ ಕೇಂದ್ರದಲ್ಲಿನ ಕ್ರೀಡಾಂಗಣಕ್ಕೆ ಕಾಯಕಲ್ಪ ಅಗತ್ಯವಿದೆ. ಕ್ರೀಡಾಂಗಣ ಅಭಿವೃದ್ಧಿಗೊಳಿಸುವುದಾಗಿ ಸಚಿವರು ಹೇಳುತ್ತಿದ್ದಾರೆ. ಬಜೆಟ್ನಲ್ಲಿ ಮುಖ್ಯಮಂತ್ರಿ ಕ್ರೀಡಾಂಗಣ ಅಭಿವೃದ್ಧಿಗೆ ಹಣ ನೀಡಬೇಕು. ಸಚಿವರೇ ಮುತುವರ್ಜಿವಹಿಸಿದರೆ ಈ ಕಾರ್ಯಗಳು ಜಾರಿಗೊಳ್ಳುತ್ತವೆ.ಮಂಚನಬಲೆ ಶ್ರೀನಿವಾಸ್ ಜಂಟಿ ಕಾರ್ಯದರ್ಶಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್
ನೀರಾವರಿಗೆ ಅನುದಾನ ಅಗತ್ಯ ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರಕ್ಕೆ ಆದಷ್ಟು ಬೇಗ ಹರಿಸಬೇಕಿದೆ. ಎಚ್.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಬೇಕು. ಯಾವುದೇ ಕಾಮಗಾರಿಗಳಿಗಿಂತ ಚಿಕ್ಕಬಳ್ಳಾಪುರಕ್ಕೆ ಪ್ರಮುಖವಾಗಿ ಶುದ್ದ ನೀರು ಬೇಕಾಗಿದೆ. ನೀರಾವರಿ ವಿಚಾರವು ಬಜೆಟ್ನಲ್ಲಿ ಪ್ರಸ್ತಾಪವಾಗಬೇಕು.ಮೋಹನ್ ಕುಮಾರ್ ವಕೀಲ ಚಿಕ್ಕಬಳ್ಳಾಪುರ
ಎತ್ತಿನಹೊಳೆ ನೀರು ಬರಲಿ ಮೊದಲು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬರಬೇಕು. ಇದರಿಂದ ಬರಡು ಭೂಮಿ ಹಸಿರಾಗುತ್ತದೆ. ರೈತರ ಬದುಕು ಹಸನಾಗುತ್ತದೆ. ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯು ಕೃಷಿ ಪ್ರಧಾನವಾಗಿದೆ. ನವದೆಹಲಿಗೆ ಇಲ್ಲಿನ ಉತ್ಪನ್ನಗಳು ತಲುಪುವ ರೀತಿ ಸರಕು ಸಾಗಾಣಿಕೆ ರೈಲಿನ ವ್ಯವಸ್ಥೆಗಳು ಆಗಬೇಕು. ನೀರಿನ ಹಾಹಾಕಾರದಿಂದ ಬಳಲುತ್ತಿರುವ ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಮೂಲದ ಯೋಜನೆಗಳು ಜಾರಿಯಾಗಬೇಕು.ಮೋಹನ್ ಮುರುಳಿ ಚಿಕ್ಕಬಳ್ಳಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.