<p><strong>ಚಿಂತಾಮಣಿ:</strong> ನಗರದ ಜೋಡಿ ರಸ್ತೆಯಲ್ಲಿರುವ ಸಂತೋಷಿಮಾತಾ ದೇವಾಲಯದ ಗೋಪುರದ ಮೇಲಿನ ಮೂರ್ತಿಗಳನ್ನು ಕಿಡಿಗೇಡಿಗಳು ಮಂಗಳವಾರ ರಾತ್ರಿ ವಿರೂಪಗೊಳಿಸಿದ್ದಾರೆ.</p>.<p>‘ದೇವಾಲಯದ ಗೋಪುರದ ಮೇಲಿನ ಗಣೇಶ ಮತ್ತು ಸಂತೋಷಿ ಮಾತಾ ಮೂರ್ತಿಯ ಕೈ ಹಾಗೂ ಗೋಪುರದ ಮೇಲಿನ ಕಳಶಗಳನ್ನು ಜಖಂಗೊಳಿಸಿದ್ದಾರೆ. ದೇವಾಲಯದಲ್ಲಿ ಕುಂಬಾಭಿಷೇಕ ಕಾರ್ಯಕ್ರಮವಿದ್ದು ಧರ್ಮದರ್ಶಿಗಳು ಕಳೆದ 2-3 ದಿನಗಳಿಂದ ಸಿದ್ಧತೆಗಳನ್ನು ನಡೆಸುತ್ತಿದ್ದೆವು. 2 ದಿನಗಳ ಹಿಂದೆ ಗೋಪುರದ ಮೇಲೆ ಹತ್ತಿ ಪರಿಶೀಲನೆ ನಡೆಸಲಾಗಿತ್ತು. ಬುಧವಾರ ವಿಗ್ರಹಗಳನ್ನು ಜಖಂಗೊಳಿಸಿರುವುದು ಕಂಡುಬಂದಿದೆ’ ಎಂದು ದೇವಾಲಯ ಆಡಳಿತ ಮಂಡಳಿಯ ವಾಣಿ ತಿಳಿಸಿದ್ದಾರೆ.</p>.<p>‘ದೇವಾಲಯದ ಗೇಟ್ಗೆ ಬೀಗ ಹಾಕಿರುತ್ತದೆ. ಕಾವಲುಗಾರನು ಇದ್ದಾರೆ. ದೇವಾಲಯದ ಆವರಣದ ಗೋಡೆಯ ಮೇಲಿಂದ ಒಳಗಡೆ ಹೋಗಿದ್ದಾರೆ. ಒಳಗಡೆಯಿಂದ ಗೋಪುರದ ಮೇಲೆ ಹತ್ತಲು ಮೆಟ್ಟಿಲುಗಳಿವೆ. ಅನಾಮಧೇಯರು ಮೆಟ್ಟಿಲುಗಳ ಮೇಲೆ ಹೋಗಿ ಜಖಂಗೊಳಿಸಿರಬಹುದು’ ಎಂದು ಅವರು ತಿಳಿಸಿದರು. ಈ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ:</strong> ನಗರದ ಜೋಡಿ ರಸ್ತೆಯಲ್ಲಿರುವ ಸಂತೋಷಿಮಾತಾ ದೇವಾಲಯದ ಗೋಪುರದ ಮೇಲಿನ ಮೂರ್ತಿಗಳನ್ನು ಕಿಡಿಗೇಡಿಗಳು ಮಂಗಳವಾರ ರಾತ್ರಿ ವಿರೂಪಗೊಳಿಸಿದ್ದಾರೆ.</p>.<p>‘ದೇವಾಲಯದ ಗೋಪುರದ ಮೇಲಿನ ಗಣೇಶ ಮತ್ತು ಸಂತೋಷಿ ಮಾತಾ ಮೂರ್ತಿಯ ಕೈ ಹಾಗೂ ಗೋಪುರದ ಮೇಲಿನ ಕಳಶಗಳನ್ನು ಜಖಂಗೊಳಿಸಿದ್ದಾರೆ. ದೇವಾಲಯದಲ್ಲಿ ಕುಂಬಾಭಿಷೇಕ ಕಾರ್ಯಕ್ರಮವಿದ್ದು ಧರ್ಮದರ್ಶಿಗಳು ಕಳೆದ 2-3 ದಿನಗಳಿಂದ ಸಿದ್ಧತೆಗಳನ್ನು ನಡೆಸುತ್ತಿದ್ದೆವು. 2 ದಿನಗಳ ಹಿಂದೆ ಗೋಪುರದ ಮೇಲೆ ಹತ್ತಿ ಪರಿಶೀಲನೆ ನಡೆಸಲಾಗಿತ್ತು. ಬುಧವಾರ ವಿಗ್ರಹಗಳನ್ನು ಜಖಂಗೊಳಿಸಿರುವುದು ಕಂಡುಬಂದಿದೆ’ ಎಂದು ದೇವಾಲಯ ಆಡಳಿತ ಮಂಡಳಿಯ ವಾಣಿ ತಿಳಿಸಿದ್ದಾರೆ.</p>.<p>‘ದೇವಾಲಯದ ಗೇಟ್ಗೆ ಬೀಗ ಹಾಕಿರುತ್ತದೆ. ಕಾವಲುಗಾರನು ಇದ್ದಾರೆ. ದೇವಾಲಯದ ಆವರಣದ ಗೋಡೆಯ ಮೇಲಿಂದ ಒಳಗಡೆ ಹೋಗಿದ್ದಾರೆ. ಒಳಗಡೆಯಿಂದ ಗೋಪುರದ ಮೇಲೆ ಹತ್ತಲು ಮೆಟ್ಟಿಲುಗಳಿವೆ. ಅನಾಮಧೇಯರು ಮೆಟ್ಟಿಲುಗಳ ಮೇಲೆ ಹೋಗಿ ಜಖಂಗೊಳಿಸಿರಬಹುದು’ ಎಂದು ಅವರು ತಿಳಿಸಿದರು. ಈ ಬಗ್ಗೆ ನಗರ ಠಾಣೆಗೆ ದೂರು ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>