<p>ಚಿಕ್ಕಬಳ್ಳಾಪುರ: ‘ಕಣ್ಣೊರೆಸುವ ತಂತ್ರವನ್ನು ನಮ್ಮ ಪಾಲನ್ನು ನಮಗೆ ಸರ್ಕಾರ ಕೊಡಬೇಕು. ಈ ಹಿಂದೆ ಒಳಮೀಸಲಾತಿ ವಿಚಾರವಾಗಿ ನಿರ್ಲಕ್ಷ್ಯ ತೋರಿದ ಸಿದ್ದರಾಮಯ್ಯ ಅವರ ಸರ್ಕಾರವನ್ನೂ ಮನೆಗೆ ಕಳುಹಿಸಿದ್ದೇವೆ’ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್.ಗಂಗಾಧರಪ್ಪ ಆಗ್ರಹಿಸಿದರು. </p>.<p>ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸರ್ಕಾರಗಳು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಹಿಂದೆ ಮುಂದೆ ನೋಡುತ್ತಿವೆ ಎಂದರು. </p>.<p>ಕೊರಚ, ಲಂಬಾಣಿ, ಭೋವಿ ಸಮುದಾಯದವರು ಆಯೋಗದ ವರದಿಯನ್ನು ತಿರಸ್ಕರಿಸಿ ಎಂದು ಹೋರಾಟ ನಡೆಸುತ್ತಿದ್ದಾರೆ. ಆದರೆ 1972ರವರೆಗೆ ಈ ಸಮುದಾಯಗಳು ಎಸ್ಸಿ ಪಟ್ಟಿಯಲ್ಲಿಯೇ ಇರಲಿಲ್ಲ. ಎಲ್.ಜಿ.ಹಾವನೂರ್ ಅವರ ವರದಿಯ ನಂತರ ಈ ಸಮುದಾಯಗಳು ಎಸ್ಸಿ ಪಟ್ಟಿ ಸೇರಿದವು ಎಂದು ಹೇಳಿದರು. </p>.<p>ಪರಿಶಿಷ್ಟ ಪಟ್ಟಿಯಲ್ಲಿರುವ ಹೊಲೆಯ ಮತ್ತು ಮಾದಿಗರಿಗಿಂತ ಲಂಬಾಣಿ, ಭೋವಿ ಸಮುದಾಯಗಳು ಮೀಸಲಾಥಿಯ ಅವಕಾಶವನ್ನು ಹೆಚ್ಚು ಪಡೆದಿವೆ. ನಾವು ಮೀಸಲಾತಿಯಿಂದ ಹೊರಗೆಯೇ ಇದ್ದೇವೆ. ನಾವು ಅವರನ್ನು ಎಸ್ಸಿ ಪಟ್ಟಿಯಿಂದ ಹೊರ ತೆಗೆಯಿರಿ ಎನ್ನುತ್ತಿಲ್ಲ. ಜನಸಂಖ್ಯೆಗೆ<br />ಅನುಗುಣವಾಗಿ ನಮಗೆ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದೇವೆ<br />ಎಂದರು. </p>.<p>ಆಯೋಗದ ವರದಿಗೆ ವಿರೋಧವನ್ನು ಈ ಸಮುದಾಯಗಳು ಮುಂದುವರಿಸಿದರೆ ನಾವು ಇವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ತೆಗೆಯಿರಿ ಎಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.</p>.<p>ಸರ್ಕಾರ ರಚಿಸಿರುವ ಉಪಸಮಿತಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಸಹ ಇದ್ದಾರೆ. ಜಿಲ್ಲೆಯಲ್ಲಿ ಮಾದಿಗರು ಹೆಚ್ಚು ಇದ್ದೇವೆ. ಸಚಿವರು ಗಮನವಹಿಸಬೇಕು. ವರ್ಗೀಕರಣದ ಪರವಾಗಿ ಇರಬೇಕು ಎಂದರು.</p>.<p>ದಸಂಸ ಜಿಲ್ಲಾ ಅಧ್ಯಕ್ಷ ನರಸಿಂಹಪ್ಪ ಮಾತನಾಡಿ, ಕೊರಚ, ಲಂಬಾಣಿ ಮತ್ತು ಭೋವಿ ಸಮುದಾಯದವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿಗಾಗಿ ಅವರು ಯಾವುದೇ ಹೋರಾಟ ಮಾಡಿಲ್ಲ ಎಂದರು.</p>.<p>ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಯಾಗಬೇಕು. ಇದಕ್ಕೆ ಈ ಸಮುದಾಯಗಳು ಸಹಕರಿಸಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಇರೋಣ. ಒಕ್ಕಲಿಗರು, ಲಿಂಗಾಯತರು, ಬಲಿಜಿಗರು ಸೇರಿದಂತೆ ಎಲ್ಲರಿಗೂ ನಾವು ಮತ ಹಾಕಿದ್ದೇವೆ. ಆದರೆ ನಮ್ಮ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು. </p>.<p>ಮಂಜು ತುಳಸಿ, ನಾಗೇಶ್ ಕೊಳವನಹಳ್ಳಿ, ಜಯರಾಮ್ ಶ್ರೀರಾಮಪುರ, ನರಸಿಂಹಯ್ಯ ಮಂಚೇನಹಳ್ಳಿ, ಮಂಜುನಾಥ್ ಸಾದಲಿ, ಗಂಗಣ್ಣ ಇತರರು ಗೋಷ್ಠಿಯಲ್ಲಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ‘ಕಣ್ಣೊರೆಸುವ ತಂತ್ರವನ್ನು ನಮ್ಮ ಪಾಲನ್ನು ನಮಗೆ ಸರ್ಕಾರ ಕೊಡಬೇಕು. ಈ ಹಿಂದೆ ಒಳಮೀಸಲಾತಿ ವಿಚಾರವಾಗಿ ನಿರ್ಲಕ್ಷ್ಯ ತೋರಿದ ಸಿದ್ದರಾಮಯ್ಯ ಅವರ ಸರ್ಕಾರವನ್ನೂ ಮನೆಗೆ ಕಳುಹಿಸಿದ್ದೇವೆ’ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್.ಗಂಗಾಧರಪ್ಪ ಆಗ್ರಹಿಸಿದರು. </p>.<p>ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸರ್ಕಾರಗಳು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಹಿಂದೆ ಮುಂದೆ ನೋಡುತ್ತಿವೆ ಎಂದರು. </p>.<p>ಕೊರಚ, ಲಂಬಾಣಿ, ಭೋವಿ ಸಮುದಾಯದವರು ಆಯೋಗದ ವರದಿಯನ್ನು ತಿರಸ್ಕರಿಸಿ ಎಂದು ಹೋರಾಟ ನಡೆಸುತ್ತಿದ್ದಾರೆ. ಆದರೆ 1972ರವರೆಗೆ ಈ ಸಮುದಾಯಗಳು ಎಸ್ಸಿ ಪಟ್ಟಿಯಲ್ಲಿಯೇ ಇರಲಿಲ್ಲ. ಎಲ್.ಜಿ.ಹಾವನೂರ್ ಅವರ ವರದಿಯ ನಂತರ ಈ ಸಮುದಾಯಗಳು ಎಸ್ಸಿ ಪಟ್ಟಿ ಸೇರಿದವು ಎಂದು ಹೇಳಿದರು. </p>.<p>ಪರಿಶಿಷ್ಟ ಪಟ್ಟಿಯಲ್ಲಿರುವ ಹೊಲೆಯ ಮತ್ತು ಮಾದಿಗರಿಗಿಂತ ಲಂಬಾಣಿ, ಭೋವಿ ಸಮುದಾಯಗಳು ಮೀಸಲಾಥಿಯ ಅವಕಾಶವನ್ನು ಹೆಚ್ಚು ಪಡೆದಿವೆ. ನಾವು ಮೀಸಲಾತಿಯಿಂದ ಹೊರಗೆಯೇ ಇದ್ದೇವೆ. ನಾವು ಅವರನ್ನು ಎಸ್ಸಿ ಪಟ್ಟಿಯಿಂದ ಹೊರ ತೆಗೆಯಿರಿ ಎನ್ನುತ್ತಿಲ್ಲ. ಜನಸಂಖ್ಯೆಗೆ<br />ಅನುಗುಣವಾಗಿ ನಮಗೆ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದೇವೆ<br />ಎಂದರು. </p>.<p>ಆಯೋಗದ ವರದಿಗೆ ವಿರೋಧವನ್ನು ಈ ಸಮುದಾಯಗಳು ಮುಂದುವರಿಸಿದರೆ ನಾವು ಇವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ತೆಗೆಯಿರಿ ಎಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.</p>.<p>ಸರ್ಕಾರ ರಚಿಸಿರುವ ಉಪಸಮಿತಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಸಹ ಇದ್ದಾರೆ. ಜಿಲ್ಲೆಯಲ್ಲಿ ಮಾದಿಗರು ಹೆಚ್ಚು ಇದ್ದೇವೆ. ಸಚಿವರು ಗಮನವಹಿಸಬೇಕು. ವರ್ಗೀಕರಣದ ಪರವಾಗಿ ಇರಬೇಕು ಎಂದರು.</p>.<p>ದಸಂಸ ಜಿಲ್ಲಾ ಅಧ್ಯಕ್ಷ ನರಸಿಂಹಪ್ಪ ಮಾತನಾಡಿ, ಕೊರಚ, ಲಂಬಾಣಿ ಮತ್ತು ಭೋವಿ ಸಮುದಾಯದವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿಗಾಗಿ ಅವರು ಯಾವುದೇ ಹೋರಾಟ ಮಾಡಿಲ್ಲ ಎಂದರು.</p>.<p>ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಯಾಗಬೇಕು. ಇದಕ್ಕೆ ಈ ಸಮುದಾಯಗಳು ಸಹಕರಿಸಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಇರೋಣ. ಒಕ್ಕಲಿಗರು, ಲಿಂಗಾಯತರು, ಬಲಿಜಿಗರು ಸೇರಿದಂತೆ ಎಲ್ಲರಿಗೂ ನಾವು ಮತ ಹಾಕಿದ್ದೇವೆ. ಆದರೆ ನಮ್ಮ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು. </p>.<p>ಮಂಜು ತುಳಸಿ, ನಾಗೇಶ್ ಕೊಳವನಹಳ್ಳಿ, ಜಯರಾಮ್ ಶ್ರೀರಾಮಪುರ, ನರಸಿಂಹಯ್ಯ ಮಂಚೇನಹಳ್ಳಿ, ಮಂಜುನಾಥ್ ಸಾದಲಿ, ಗಂಗಣ್ಣ ಇತರರು ಗೋಷ್ಠಿಯಲ್ಲಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>