ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ರೂಪಿಸಿದ ಯೋಜನೆಯ ಫಲ ಜನರಿಗೆ, ರೈತರಿಗೆ ತಲುಪದಿದ್ದರೆ ಅಂಥ ಯೋಜನೆ ರೂಪಿಸಿ ಉಪಯೋಗ ಏನು? ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಒಂದು ಕಾಲದಲ್ಲಿ ಏನೂ ಇರಲಿಲ್ಲ. ಈಗ ಅಲ್ಲೆಲ್ಲ ಹಸಿರು ಕಂಗೊಳಿಸುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಇಸ್ರೇಲ್ ಸಾಧಿಸಿರುವುದನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ. ರಾಜಕಾರಣಿಗಳು ಮತ್ತು ಆಡಳಿತಶಾಹಿಗೆ ಈಗಲೂ ಬುದ್ದಿ ಬಂದಿಲ್ಲ ಎಂದಾದರೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಬಂದೊದಗಿದ ಸ್ಥಿತಿಯೇ ಮುಂದೊಂದು ದಿನ ರಾಜ್ಯದ ಎಲ್ಲರಿಗೂ ಬರಲಿದೆ.
ಮತ್ತೊಂದು ಎತ್ತಿನಹೊಳೆ?
ದೇಶದಲ್ಲಿರುವ ತಾಂತ್ರಿಕತೆಯನ್ನೇ ಸಮರ್ಪಕವಾಗಿ ಬಳಸಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈಗ ಇಡೀ ದೇಶದಲ್ಲೇ ಅಂತರ್ಜಲ ಮಟ್ಟ ಕುಸಿದ ಬಗ್ಗೆ ವರದಿಯಾಗುತ್ತಿದೆ. ಮೂರನೇ ಹಂತದ ಶುದ್ಧೀಕರಣ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡದಿದ್ದರೆ ಅದು ಮತ್ತೊಂದು ಎತ್ತಿನಹೊಳೆ ಯೋಜನೆ ಆಗಲಿದೆ.