‘ಪ್ರಶ್ನಿಸುವ ಅಧ್ಯಾತ್ಮ ಕಲಿಸಿದ ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಮಾದರಿಯಾಗಲಿ. ಕಠಿಣ ಪರಿಶ್ರಮ, ಬದ್ಧತೆ ಮತ್ತು ತ್ಯಾಗದಿಂದ ಮಾತ್ರ ಒಳ್ಳೆಯದನ್ನು ಸಾಧಿಸಲು ಸಾಧ್ಯ. ಅಪಮಾನದ ಮಧ್ಯೆ ಜಗತ್ತಿಗೆ ಬೆಳಕಾದ ಅಂಬೇಡ್ಕರ್, ತ್ಯಾಗದ ಪ್ರತೀಕವಾದ ಭಗತ್ ಸಿಂಗ್ ಯುವಜನರಿಗೆ ಮಾದರಿಯಾಗಬೇಕು. ಅವರ ಬದುಕು, ಹೋರಾಟ ನಮಗೆಲ್ಲಾ ಸ್ಪೂರ್ತಿಯಾಗಲಿ. ಸಾಮರಸ್ಯದ ಸಮಾಜ ನಿರ್ಮಿಸಲು ಆಂದೋಲನ ಬಲಗೊಳ್ಳಲಿ’ ಎಂದು ತಿಳಿಸಿದರು.