‘ತಮಿಳು ಸಂಸ್ಕೃತಿಗೆ ಕಾರಣ ಬಿಎಸ್ವೈ’
ಕಾಂಗ್ರೆಸ್ ಬಿಜೆಪಿ ಜೆಡಿಎಸ್ನವರು ರಣಹೇಡಿಗಳು. ಅವರಿಗೆ ಭಾಷೆಯ ಬಗ್ಗೆ ಗೌರವವಿಲ್ಲ. ರಾಜಕೀಯ ಅಧಿಕಾರ ಲೂಟಿಯೇ ಪ್ರಮುಖವಾಗಿದೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು. ಈ ರಾಜ್ಯಕ್ಕೆ ತಿರುವಳ್ಳುವರ್ ಪ್ರತಿಮೆ ತಂದವರು ಯಡಿಯೂರಪ್ಪ. ತಮಿಳು ಸಂಸ್ಕೃತಿ ರಾಜ್ಯಕ್ಕೆ ಬರಲು ಕಾರಣ ಅವರು. ಆದರೆ ಈಗ ಬಿಜೆಪಿಯವರು ಕಮಲ್ ಹಾಸನ್ ಬಗ್ಗೆ ಮಾತನಾಡುತ್ತಾರೆ. ಅಂದು ತಿರುವಳ್ಳುವರ್ ಪ್ರತಿಮೆ ಏಕೆ ಇಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದರು.