ಕೊಟ್ಟಿಗೆಹಾರ: ಕಣ್ಣು ಹಾಯಿಸಿದಷ್ಟು ದೂರ ಹಬ್ಬಿರುವ ಹಸಿರ ರಾಶಿ, ಹಕ್ಕಿಗಳ ಕಲರವ, ಹೂವು, ಬಳ್ಳಿಗಳ ಮನಮೋಹಕ ದೃಶ್ಯ, ಈ ಅಪೂರ್ವ ದೃಶ್ಯಗಳನ್ನು ನೋಡುತ್ತಾ ಗಾಜಿನ ಮನೆಯಲ್ಲಿ ಕುಳಿತು ಪುಸ್ತಕ ಓದುವ ಅನುಭವ ಅವರ್ಣನೀಯ. ಅಂತಹ ಅನನ್ಯ ಅನುಭವದ ಭಾಗ್ಯ ಓದುಗರಿಗೆ ಶುಕ್ರವಾರದಿಂದ ಮುಕ್ತವಾಗಲಿದೆ. ಇದು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ನಿರ್ಮಿಸಿದರುವ ‘ತೇಜಸ್ವಿ ಓದಿನ ಮನೆ’.