ಬೆಳಿಗ್ಗೆ ಈ ದಾರಿಯಲ್ಲಿ ವಾಯುವಿಹಾರಕ್ಕೆ ಬರುವವರಿಗೆ ರಸ್ತೆಯಲ್ಲಿ ಬಿದ್ದಿರುವ ಗಾಜಿನ ತುಂಡುಗಳು, ಬಾಟಲಿಗಳು ತೊಂದರೆಯಾಗಿವೆ. ಮುಸ್ಸಂಜೆ ವೇಳೆಯಲ್ಲೇ ಕುಡುಕರು ಈ ರಸ್ತೆಯಲ್ಲಿ ಸೇರುವುದರಿಂದ ಮಹಿಳೆಯರು, ವಾಹನ ಚಾಲಕರು ಭಯ ಪಡುವಂತಾಗಿದೆ. ಮಲ್ಲೇಶ್ವರದ ಪಾರ್ಕ್ ಬಳಿ, ಬೆಂಕಿ ಕಲ್ಯಾಣ ಮಂಟಪದ ಮುಂದಿನ ಜಾಗ, ಬಿಳವಾಲಕ್ಕೆ ಹೋಗುವ ರಸ್ತೆ ಬದಿಗಳಲ್ಲೂ ಕುಡುಕರ ಹಾವಳಿ ಹೆಚ್ಚಿದೆ. ಹೆದ್ದಾರಿ ಗಸ್ತು ತಿರುಗುವ ಪೊಲೀಸರ ಭಯವೂ ಕುಡುಕರಿಗಿಲ್ಲ. ಬೈ ಪಾಸ್ ಮುಖ್ಯ ರಸ್ತೆಯಲ್ಲಿ ಕೆಲವು ಯುವಕರು ಕರ್ಕಶ ಶಬ್ಧದೊಡನೆ ಸ್ಕೂಟರ್ ವೀಲಿಂಗ್ ಮಾಡುತ್ತಿರುತ್ತಾರೆ. ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು.