ಈ ಸಂದರ್ಭದಲ್ಲಿ ಮಾತನಾಡಿದ ಚೆನ್ನಕೇಶವ ಅವರು ಸೇತುವೆ ತುಂಬ ಹಳೆಯದಾಗಿದ್ದು ಕಿರಿದಾಗಿದೆ. ಶಿಥಿಲಗೊಂಡಿರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು ಘನ ವಾಹನ ಸಂಚಾರವನ್ನು ನಿರ್ಬಂಧಿಸಿ ಎಚ್ಚರಿಕೆ ಫಲಕ ಹಾಕಲು ತೀರ್ಮಾನಿಸಲಾಗಿದೆ. ಹೊಸ ಸೇತುವೆ ನಿರ್ಮಿಸುವ ಬಗ್ಗೆ ಶಾಸಕಿ ನಯನಾ ಮೋಟಮ್ಮ ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು' ಎಂದರು. ಇಲಾಖೆ ಅಧಿಕಾರಿ ಚೆನ್ನಯ್ಯ, ಗ್ರಾಮಸ್ಥರಾದ ಬಿ.ಎನ್.ದಿವ್ಯಾ ಪ್ರಸಾದ್, ಬಿ.ಟಿ.ಶರತ್, ಬಿ.ಎನ್.ಸಂದೇಶ್, ಬಿ.ಸಿ.ಪ್ರವೀಣ್ ಇದ್ದರು.