‘ಮನೆ ಕಟ್ಟಲು ಹಣ ಹೊಂದಿಸಿಟ್ಟಿದ್ದೆ. ಮನೆ ನಿರ್ಮಾಣಕ್ಕಾಗಿ ಸಾಗುವಾನಿ, ಬೇವಿನ ಮರ ಸಿದ್ದಗೊಳಿಸಿ ಇರಿಸಿದ್ದೆ. ಅವೆಲ್ಲವೂ ಸುಟ್ಟು ಹೋಗಿವೆ. ಟಿವಿ, ಕಪಾಟು, ಮಂಚ, ದಿನಸಿ, ಬಟ್ಟೆ ಎಲ್ಲವೂ ಬೆಂಕಿಗೆ ಆಹುತಿಯಾಗಿದ್ದು, ದಿಕ್ಕೇ ತೋಚದಂತಾಗಿದೆ. ಸಂಬಂಧಪಟ್ಟವರು ಪರಿಹಾರ ನೀಡಬೇಕು’ ಎಂದು ಮನೆ ಮಾಲೀಕ ವೆಂಕಟೇಶಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.