‘ಸದ್ಯ ಈರುಳ್ಳಿ ಬಿತ್ತನೆ ಬೀಜದ ದರದ ಏರುಮುಖವಾಗಿದ್ದು, ಸೀಮೆ ಯಲ್ಲಿ ಪದ್ಧತಿ ಇರುವ ಸೇರಿನ ಅಳತೆಗೆ ₹ 1,500 ತಲುಪಿದೆ. ಒಂದು ಎಕರೆ ಭೂಮಿಗೆ ಅಂದಾಜು ಏಳರಿಂದ ಎಂಟು ಸೇರು ಬಿತ್ತನೆ ಬೀಜದ ಅವಶ್ಯಕತೆ ಇದ್ದು, 2 ಚೀಲ ಡಿಎಪಿ ಗೊಬ್ಬರ, 2 ಬೇಸಾಯ, 3 ಆಳುಗಳು ಸೇರಿ ಬಿತ್ತನೆ ಹಂತದಲ್ಲಿಯೇ ₹ 15 ಸಾವಿರ ಖರ್ಚು ಮಾಡಬೇಕಿದೆ. ನಂತರ ದಿನಗಳಲ್ಲಿ ಕಳೆ, ಅಗತ್ಯ ಬಿದ್ದರೆ ಔಷಧ ಸಿಂಪಡಣೆ ಮೊದಲಾದ ವೆಚ್ಚಗಳು ಸೇರಿ ಒಟ್ಟಾರೆ ₹ 30 ಸಾವಿರ ವಿನಿಯೋಗಿಸಬೇಕಾಗುತ್ತದೆ’ಎನ್ನುತ್ತಾರೆ ಬೆಳೆಗಾರ ನಾಗರಾಜ್.