<p><strong>ಚಿಕ್ಕಮಗಳೂರು</strong>: ಬಾಯಿಗೆ ಮೂತ್ರ ಹುಯ್ಯಿಸಿ, ನೆಲದಲ್ಲಿದ್ದ ಮೂತ್ರ ನೆಕ್ಕಿಸಿದ್ದಾರೆ ಎಂದು ಪರಿಶಿಷ್ಟ ಸಮುದಾಯದ ಯುವಕ ನೀಡಿರುವ ದೂರಿಗೆ ಸಂಬಂಧಿಸಿದಂತೆ ಪಿಎಸ್ಐ ಕೆ.ಅರ್ಜುನ್ ಹೊರಕೇರಿ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.</p>.<p>ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣೆಯ ಪಿಎಸ್ಐ ಅವರು ಬಾಯಿಗೆ ಮೂತ್ರ ಹುಯ್ಯಿಸಿ, ಹಿಗ್ಗಾಮುಗ್ಗಾ ಥಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಕಿರುಗುಂದ ಗ್ರಾಮದ ಯುವಕ ಕೆ.ಎಲ್.ಪುನೀತ್ ಅವರು ಈಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.</p>.<p>ಪೊಲೀಸ್ ಮಹಾನಿರ್ದೇಶಕ, ಪಶ್ಚಿಮ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿಗೆ ದೂರು ಪ್ರತಿಗಳನ್ನು ರವಾನಿಸಿದ್ದಾರೆ.</p>.<p>‘ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಡಿವೈಎಸ್ಪಿಗೆ ಹೊಣೆ ವಹಿಸಲಾಗಿತ್ತು. ವಿಚಾರಣೆ ನಡೆಸಿ ಅವರು ವರದಿ ನೀಡಿದ್ದಾರೆ. ಗೋಣಿಬೀಡು ಠಾಣೆ ಪಿಎಸ್ಐ ಅರ್ಜುನ್ ಅವರನ್ನು ಡಿಸಿಆರ್ಬಿಗೆ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ತಿಳಿಸಿದರು.</p>.<p><strong>ಪುನೀತ್ ದಾಖಲಿಸಿರುವ ದೂರಿನ ಸಾರಾಂಶ</strong>: ಇದೇ 10ರಂದು ಬೆಳಿಗ್ಗೆ 7.30 ರ ಹೊತ್ತಿನಲ್ಲಿ ಕೆಲವರು ನಮ್ಮ ಮನೆ ಬಳಿಗೆ ಬಂದರು. ಮಹಿಳೆಗೆ ಫೋನ್ ಮಾಡಿದ್ದೀಯಾ ನಿನ್ಹತ್ರ ಮಾತನಾಡಬೇಕು ಬಾ ಎಂದು ಕರೆದರು. ಅವರು ತುಂಬಾ ಜನ ಇದ್ದಿದ್ದರಿಂದ ನಾನು ಹೊರ ಹೋಗಲಿಲ್ಲ. ಅವರು ಮನೆ ಸುತ್ತುವರಿದಿದ್ದರು.</p>.<p>ರಕ್ಷಣೆಗಾಗಿ 112ಗೆ ಕರೆ ಮಾಡಿದಾಗ ಪೊಲೀಸರು ಬಂದು ವಿಚಾರಿಸಿದರು. ಅವರು ಗೋಣಿಬೀಡು ಠಾಣೆ ಪಿಎಸ್ಐಗೆ ಕರೆ ಮಾಡಿದರು. ಪಿಎಸ್ಐ ಬಂದು ನನ್ನನ್ನು ಏನೂ ವಿಚಾರಣೆ ಮಾಡದೆ ಜೀಪು ಹತ್ತಲು ಹೇಳಿದರು. ಯಾಕೆ ಎಂದು ಕೇಳಿದಾಗ ಬೈದು, ಠಾಣೆಗೆ ಕರೆದೊಯ್ದರು.</p>.<p>ಠಾಣೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದರು. ಮಹಿಳೆ ಜೊತೆಗೆ ಎಷ್ಟು ದಿನದಿಂದ ಸಂಬಂಧ ಇತ್ತು ಎಂದು ಕೇಳಿದರು. ಮಹಿಳೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಆರು ತಿಂಗಳ ಹಿಂದೆ ಫೋನ್ನಲ್ಲಿ ಮಾತಾಡಿದ್ದೆ, ಈ ಬಗ್ಗೆ ವಿಚಾರಣೆ ನಡೆದು ತೀರ್ಮಾನವಾಗಿತ್ತು, ಆನಂತರ ಫೋನ್ ಮಾಡಿಲ್ಲ ಎಂದು ಹೇಳಿದೆ. ಪಿಎಸ್ಐ ಕೆಟ್ಟದಾಗಿ ಬೈದರು.</p>.<p>ಎಷ್ಟು ಬೇಡಿಕೊಂಡರೂ ಕೇಳಲಿಲ್ಲ, ಒಪ್ಪಿಕೊ ಎಂದು ಹಿಂಸೆ ಮಾಡಿದರು. ನನ್ನನ್ನು ಬಿಡಿ ಎಂದು ಕೇಳಿಕೊಂಡೆ. ನಂತರ ಬಿಡುತ್ತೇನೆ ಒಪ್ಪಿಕೊ ಎಂದು ಹೊಡೆದರು. ಕೈಕಾಲಿನಲ್ಲಿ ರಕ್ತ ಬರುತ್ತಿತ್ತು. ಅವರು ಹೇಳಿದಂತೆ ಒಪ್ಪಿಕೊಂಡೆ.</p>.<p>ನನ್ನ ಜಾತಿ ಯಾವುದು ಎಂದು ಪಿಎಸ್ಐ ಕೇಳಿದರು. ಎಸ್ಸಿ ಎಂದು ಹೇಳಿದೆ. ತುಂಬಾ ಕೆಟ್ಟದಾಗಿ ಬೈದರು.</p>.<p>ಬಾಯಾರಿಕೆಯಾಗಿದೆ ನೀರು ಕೊಡಿ ಎಂದು ಕೇಳಿದೆ. ವ್ಯಕ್ತಿಯೊಬ್ಬನನ್ನು ಕರೆಸಿ ಬಾಯಿಗೆ ಉಚ್ಚೆ ಮಾಡಿಸಿದರು. ನೆಲದಲ್ಲಿ ಬಿದ್ದ ಮೂತ್ರವನ್ನು ನೆಕ್ಕಿಸಿದರು. ಹಿಂಸೆ ಕೊಟ್ಟ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದರು ಎಂದು ಪುನೀತ್ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಬಾಯಿಗೆ ಮೂತ್ರ ಹುಯ್ಯಿಸಿ, ನೆಲದಲ್ಲಿದ್ದ ಮೂತ್ರ ನೆಕ್ಕಿಸಿದ್ದಾರೆ ಎಂದು ಪರಿಶಿಷ್ಟ ಸಮುದಾಯದ ಯುವಕ ನೀಡಿರುವ ದೂರಿಗೆ ಸಂಬಂಧಿಸಿದಂತೆ ಪಿಎಸ್ಐ ಕೆ.ಅರ್ಜುನ್ ಹೊರಕೇರಿ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.</p>.<p>ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣೆಯ ಪಿಎಸ್ಐ ಅವರು ಬಾಯಿಗೆ ಮೂತ್ರ ಹುಯ್ಯಿಸಿ, ಹಿಗ್ಗಾಮುಗ್ಗಾ ಥಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಕಿರುಗುಂದ ಗ್ರಾಮದ ಯುವಕ ಕೆ.ಎಲ್.ಪುನೀತ್ ಅವರು ಈಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.</p>.<p>ಪೊಲೀಸ್ ಮಹಾನಿರ್ದೇಶಕ, ಪಶ್ಚಿಮ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿಗೆ ದೂರು ಪ್ರತಿಗಳನ್ನು ರವಾನಿಸಿದ್ದಾರೆ.</p>.<p>‘ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಡಿವೈಎಸ್ಪಿಗೆ ಹೊಣೆ ವಹಿಸಲಾಗಿತ್ತು. ವಿಚಾರಣೆ ನಡೆಸಿ ಅವರು ವರದಿ ನೀಡಿದ್ದಾರೆ. ಗೋಣಿಬೀಡು ಠಾಣೆ ಪಿಎಸ್ಐ ಅರ್ಜುನ್ ಅವರನ್ನು ಡಿಸಿಆರ್ಬಿಗೆ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ತಿಳಿಸಿದರು.</p>.<p><strong>ಪುನೀತ್ ದಾಖಲಿಸಿರುವ ದೂರಿನ ಸಾರಾಂಶ</strong>: ಇದೇ 10ರಂದು ಬೆಳಿಗ್ಗೆ 7.30 ರ ಹೊತ್ತಿನಲ್ಲಿ ಕೆಲವರು ನಮ್ಮ ಮನೆ ಬಳಿಗೆ ಬಂದರು. ಮಹಿಳೆಗೆ ಫೋನ್ ಮಾಡಿದ್ದೀಯಾ ನಿನ್ಹತ್ರ ಮಾತನಾಡಬೇಕು ಬಾ ಎಂದು ಕರೆದರು. ಅವರು ತುಂಬಾ ಜನ ಇದ್ದಿದ್ದರಿಂದ ನಾನು ಹೊರ ಹೋಗಲಿಲ್ಲ. ಅವರು ಮನೆ ಸುತ್ತುವರಿದಿದ್ದರು.</p>.<p>ರಕ್ಷಣೆಗಾಗಿ 112ಗೆ ಕರೆ ಮಾಡಿದಾಗ ಪೊಲೀಸರು ಬಂದು ವಿಚಾರಿಸಿದರು. ಅವರು ಗೋಣಿಬೀಡು ಠಾಣೆ ಪಿಎಸ್ಐಗೆ ಕರೆ ಮಾಡಿದರು. ಪಿಎಸ್ಐ ಬಂದು ನನ್ನನ್ನು ಏನೂ ವಿಚಾರಣೆ ಮಾಡದೆ ಜೀಪು ಹತ್ತಲು ಹೇಳಿದರು. ಯಾಕೆ ಎಂದು ಕೇಳಿದಾಗ ಬೈದು, ಠಾಣೆಗೆ ಕರೆದೊಯ್ದರು.</p>.<p>ಠಾಣೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದರು. ಮಹಿಳೆ ಜೊತೆಗೆ ಎಷ್ಟು ದಿನದಿಂದ ಸಂಬಂಧ ಇತ್ತು ಎಂದು ಕೇಳಿದರು. ಮಹಿಳೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಆರು ತಿಂಗಳ ಹಿಂದೆ ಫೋನ್ನಲ್ಲಿ ಮಾತಾಡಿದ್ದೆ, ಈ ಬಗ್ಗೆ ವಿಚಾರಣೆ ನಡೆದು ತೀರ್ಮಾನವಾಗಿತ್ತು, ಆನಂತರ ಫೋನ್ ಮಾಡಿಲ್ಲ ಎಂದು ಹೇಳಿದೆ. ಪಿಎಸ್ಐ ಕೆಟ್ಟದಾಗಿ ಬೈದರು.</p>.<p>ಎಷ್ಟು ಬೇಡಿಕೊಂಡರೂ ಕೇಳಲಿಲ್ಲ, ಒಪ್ಪಿಕೊ ಎಂದು ಹಿಂಸೆ ಮಾಡಿದರು. ನನ್ನನ್ನು ಬಿಡಿ ಎಂದು ಕೇಳಿಕೊಂಡೆ. ನಂತರ ಬಿಡುತ್ತೇನೆ ಒಪ್ಪಿಕೊ ಎಂದು ಹೊಡೆದರು. ಕೈಕಾಲಿನಲ್ಲಿ ರಕ್ತ ಬರುತ್ತಿತ್ತು. ಅವರು ಹೇಳಿದಂತೆ ಒಪ್ಪಿಕೊಂಡೆ.</p>.<p>ನನ್ನ ಜಾತಿ ಯಾವುದು ಎಂದು ಪಿಎಸ್ಐ ಕೇಳಿದರು. ಎಸ್ಸಿ ಎಂದು ಹೇಳಿದೆ. ತುಂಬಾ ಕೆಟ್ಟದಾಗಿ ಬೈದರು.</p>.<p>ಬಾಯಾರಿಕೆಯಾಗಿದೆ ನೀರು ಕೊಡಿ ಎಂದು ಕೇಳಿದೆ. ವ್ಯಕ್ತಿಯೊಬ್ಬನನ್ನು ಕರೆಸಿ ಬಾಯಿಗೆ ಉಚ್ಚೆ ಮಾಡಿಸಿದರು. ನೆಲದಲ್ಲಿ ಬಿದ್ದ ಮೂತ್ರವನ್ನು ನೆಕ್ಕಿಸಿದರು. ಹಿಂಸೆ ಕೊಟ್ಟ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದರು ಎಂದು ಪುನೀತ್ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>