ಬಸವರಾಜ ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುನವಳ್ಳಿಯವರು. ಕಾಮಗಾರಿಗಳ ಉಪ ಗುತ್ತಿಗೆ ಪಡೆದು, ಸಾಲ ಮಾಡಿ ನಿರ್ವಹಿಸಿದ್ದರು. ಅವರಿಗೆ ಬೆಂಗಳೂರಿನ ಐಶ್ವರ್ಯಗಿರಿ ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ನ ಮಾಲಿಕ, ಗುತ್ತಿಗೆದಾರ ಜಯರಾಮ ಅವರು ₹1.20 ಕೋಟಿ ಬಾಕಿ ಕೊಡಬೇಕಿತ್ತು. ಬಾಕಿ ಕೊಡದೆ ಸತಾಯಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಸವರಾಜ ಅವರ ಮಾವ ಈರಣ್ಣ ಕರಡಿಕೊಪ್ಪ ಬಾಳೆಹೊನ್ನೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.