<p><strong>ಚಿಕ್ಕಮಗಳೂರು/ಬಾಳೆಹೊನ್ನೂರು:</strong> ಪಟ್ಟಣದ ಲಾಡ್ಜ್ನಲ್ಲಿ ಉಪ ಗುತ್ತಿಗೆದಾರ ಬಸವರಾಜ ನಿಂಗಪ್ಪ ಮರದಬುಡುಕಿನ (46) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ ಪೊಲೀಸರು ತಂಡ ರಚಿಸಿದ್ದಾರೆ.</p>.<p>ಬಸವರಾಜ ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುನವಳ್ಳಿಯವರು. ಕಾಮಗಾರಿಗಳ ಉಪ ಗುತ್ತಿಗೆ ಪಡೆದು, ಸಾಲ ಮಾಡಿ ನಿರ್ವಹಿಸಿದ್ದರು. ಅವರಿಗೆ ಬೆಂಗಳೂರಿನ ಐಶ್ವರ್ಯಗಿರಿ ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ನ ಮಾಲಿಕ, ಗುತ್ತಿಗೆದಾರ ಜಯರಾಮ ಅವರು ₹1.20 ಕೋಟಿ ಬಾಕಿ ಕೊಡಬೇಕಿತ್ತು. ಬಾಕಿ ಕೊಡದೆ ಸತಾಯಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಸವರಾಜ ಅವರ ಮಾವ ಈರಣ್ಣ ಕರಡಿಕೊಪ್ಪ ಬಾಳೆಹೊನ್ನೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಬಾಳೆಹೊನ್ನೂರಿನ ಲಾಡ್ಜ್ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಬುಧವಾರ ಶವ ಪತ್ತೆಯಾಗಿದ್ದು, ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಬಸವರಾಜ ಆರು ತಿಂಗಳಿನಿಂದ ಬಾಳೆಹೊನ್ನೂರು ಭಾಗದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ನಿರ್ವಹಿಸುತ್ತಿದ್ದರು.</p>.<p class="Subhead"><strong>ದೂರಿನ ಸಾರಾಂಶ: ‘</strong>ಅಳಿಯ ಬಸವರಾಜ ಅವರು ಜಯರಾಮ ಅವರಿಂದ ಕಾಮಗಾರಿ ಉಪಗುತ್ತಿಗೆ ಪಡೆದು ಕೆಲಸ ಮಾಡಿಸುತ್ತಿದ್ದರು. ವಿವಿಧೆಡೆ ₹7.5 ಕೋಟಿ ಸಾಲ ಮಾಡಿ ಕಾಮಗಾರಿ ನಿರ್ವಹಿಸಿದ್ದರು. ಜಯರಾಮ ಅವರು ಎರಡು ಚೆಕ್ ನೀಡಿದ್ದರು. ಆದರೆ, ಜಯರಾಮ ಅವರಿಗೆ ಕಾಮಗಾರಿ ಬಿಲ್ ಸರ್ಕಾರದಿಂದ ಪಾವತಿಯಾಗಿದ್ದರೂ, ಕಾಮಗಾರಿ ಬಾಬ್ತು ಬಾಕಿ ಕೊಟ್ಟಿರಲಿಲ್ಲ’ ಎಂದು ಈರಣ್ಣ ಕರಡಿಕೊಪ್ಪ ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಜಯರಾಮ ಅವರು ಹಣ ಕೊಟ್ಟಿಲ್ಲ, ಫೋನ್ ಮಾಡಿದರೂ ಕರೆ ಸ್ವೀಕರಿಸಲ್ಲ. ಸಾಯುವುದು ಬಿಟ್ಟು ವಿಧಿ ಇಲ್ಲ’ ಎಂದು ಬಸವರಾಜ ಅವರು ಏ.26ರಂದು ರಾತ್ರಿ 10 ಗಂಟೆ ಸಮಯದಲ್ಲಿ ಫೋನ್ನಲ್ಲಿ ಬೇಸರದಿಂದ ಮಾತಾಡಿದ್ದರೆಂದು ನನ್ನ ಪುತ್ರಿ ರತ್ನಾ ತಿಳಿಸಿದ್ದಳು’ ಎಂದು ಉಲ್ಲೇಖಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು/ಬಾಳೆಹೊನ್ನೂರು:</strong> ಪಟ್ಟಣದ ಲಾಡ್ಜ್ನಲ್ಲಿ ಉಪ ಗುತ್ತಿಗೆದಾರ ಬಸವರಾಜ ನಿಂಗಪ್ಪ ಮರದಬುಡುಕಿನ (46) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ ಪೊಲೀಸರು ತಂಡ ರಚಿಸಿದ್ದಾರೆ.</p>.<p>ಬಸವರಾಜ ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುನವಳ್ಳಿಯವರು. ಕಾಮಗಾರಿಗಳ ಉಪ ಗುತ್ತಿಗೆ ಪಡೆದು, ಸಾಲ ಮಾಡಿ ನಿರ್ವಹಿಸಿದ್ದರು. ಅವರಿಗೆ ಬೆಂಗಳೂರಿನ ಐಶ್ವರ್ಯಗಿರಿ ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ನ ಮಾಲಿಕ, ಗುತ್ತಿಗೆದಾರ ಜಯರಾಮ ಅವರು ₹1.20 ಕೋಟಿ ಬಾಕಿ ಕೊಡಬೇಕಿತ್ತು. ಬಾಕಿ ಕೊಡದೆ ಸತಾಯಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಸವರಾಜ ಅವರ ಮಾವ ಈರಣ್ಣ ಕರಡಿಕೊಪ್ಪ ಬಾಳೆಹೊನ್ನೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಬಾಳೆಹೊನ್ನೂರಿನ ಲಾಡ್ಜ್ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಬುಧವಾರ ಶವ ಪತ್ತೆಯಾಗಿದ್ದು, ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಬಸವರಾಜ ಆರು ತಿಂಗಳಿನಿಂದ ಬಾಳೆಹೊನ್ನೂರು ಭಾಗದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ನಿರ್ವಹಿಸುತ್ತಿದ್ದರು.</p>.<p class="Subhead"><strong>ದೂರಿನ ಸಾರಾಂಶ: ‘</strong>ಅಳಿಯ ಬಸವರಾಜ ಅವರು ಜಯರಾಮ ಅವರಿಂದ ಕಾಮಗಾರಿ ಉಪಗುತ್ತಿಗೆ ಪಡೆದು ಕೆಲಸ ಮಾಡಿಸುತ್ತಿದ್ದರು. ವಿವಿಧೆಡೆ ₹7.5 ಕೋಟಿ ಸಾಲ ಮಾಡಿ ಕಾಮಗಾರಿ ನಿರ್ವಹಿಸಿದ್ದರು. ಜಯರಾಮ ಅವರು ಎರಡು ಚೆಕ್ ನೀಡಿದ್ದರು. ಆದರೆ, ಜಯರಾಮ ಅವರಿಗೆ ಕಾಮಗಾರಿ ಬಿಲ್ ಸರ್ಕಾರದಿಂದ ಪಾವತಿಯಾಗಿದ್ದರೂ, ಕಾಮಗಾರಿ ಬಾಬ್ತು ಬಾಕಿ ಕೊಟ್ಟಿರಲಿಲ್ಲ’ ಎಂದು ಈರಣ್ಣ ಕರಡಿಕೊಪ್ಪ ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಜಯರಾಮ ಅವರು ಹಣ ಕೊಟ್ಟಿಲ್ಲ, ಫೋನ್ ಮಾಡಿದರೂ ಕರೆ ಸ್ವೀಕರಿಸಲ್ಲ. ಸಾಯುವುದು ಬಿಟ್ಟು ವಿಧಿ ಇಲ್ಲ’ ಎಂದು ಬಸವರಾಜ ಅವರು ಏ.26ರಂದು ರಾತ್ರಿ 10 ಗಂಟೆ ಸಮಯದಲ್ಲಿ ಫೋನ್ನಲ್ಲಿ ಬೇಸರದಿಂದ ಮಾತಾಡಿದ್ದರೆಂದು ನನ್ನ ಪುತ್ರಿ ರತ್ನಾ ತಿಳಿಸಿದ್ದಳು’ ಎಂದು ಉಲ್ಲೇಖಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>