<p><strong>ಮೂಡಿಗೆರೆ</strong>: 'ದುರ್ಗಾದೇವಿ ಸಮಿತಿಯ ಸದಸ್ಯರೊಬ್ಬರ ಸೂಚನೆ ಮೇರೆಗೆ ಭಗವಾ ಧ್ವಜ ತೆರವುಗೊಳಿಸಿದ್ದೇನೆ’ ಎಂದು ಆರೋಹಿ ಸೌಂಡ್ ಸಿಸ್ಟಂ ಮಾಲಿಕ ಪ್ರವೀಣ್ ಪೂಜಾರಿ ಸ್ಷಷ್ಟಪಡಿಸಿದರು.</p>.<p>ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಮಹಾಗಣಪತಿ ಹಾಗೂ ದುರ್ಗಾದೇವಿ ಉತ್ಸವಕ್ಕೆ ಲೈಟಿಂಗ್ಸ್, ಸೌಂಡ್ ಸಿಸ್ಟಂ ಹಾಕಲು ನನಗೆ ಗುತ್ತಿಗೆ ನೀಡಲಾಗಿತ್ತು. ಗಣಪತಿ ವಿಸರ್ಜನೆ ಆದ ಮೇಲೆ ದುರ್ಗಾದೇವಿ ಸಮಿತಿ ಸದಸ್ಯರಾದ ಶಂಕರ್ ಎಂಬುವರು ದುರ್ಗಿ ಉತ್ಸವಕ್ಕೆ ಲೈಟಿಂಗ್ಸ್ ಅಳವಡಿಸಲು ಭಗವಾ ಧ್ವಜ ತೆರವುಗೊಳಿಸಲು ಸೂಚಿಸಿದ್ದರು. ಆದ್ದರಿಂದ ನಾನು ಭಗವಾ ಧ್ವಜ ತೆರವುಗೊಳಿಸಿದ್ದೇನೆ. ಆದರೆ, ಗಣಪತಿ ಸಮಿತಿಯವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ದುರ್ಗಿ ಸಮಿತಿಯ ಸದಸ್ಯರೊಬ್ಬರು ಮಾಡಿದ ತಪ್ಪನ್ನು ನನ್ನ ಮೇಲೆ ಹಾಕಿದ್ದಾರೆ. ಈ ಬಗ್ಗೆ ತಾನು ಯಾವ ದೇವರ ಬಳಿ ಬೇಕಾದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ದುರ್ಗಿ ಸಮಿತಿಯವರು ಭಗವಾ ಧ್ವಜ ತೆರವುಗೊಳಿಸಲು ಸೂಚಿಸಿಲ್ಲ ಎಂದಾದರೆ ಅವರು ಕೂಡ ದೇವರ ಬಳಿ ಬಂದು ಪ್ರಮಾಣ ಮಾಡಬೇಕು' ಎಂದು ಒತ್ತಾಯಿಸಿದರು.</p>.<p>ಬಿಜೆಪಿ ಯುವ ಮೋರ್ಚಾದ ತಾಲ್ಲೂಕು ಘಟಕದ ಅಧ್ಯಕ್ಷ ಅವಿನಾಶ್ ಮಾತನಾಡಿ, 'ಬಣಕಲ್ನಲ್ಲಿದ್ದ ಗೊಂಬೆ ಕುಣಿತದ ತಂಡವೊಂದಕ್ಕೆ ದುರ್ಗಿ ವಿಸರ್ಜನೆಗೆ ಮುಂಗಡ ನೀಡಲಾಗಿತ್ತು. ಆದರೆ, ಆ ತಂಡ ಕೇಸರಿ ಬಣ್ಣದ ವಸ್ತ್ರ ಧರಿಸುತ್ತಾರೆ ಎಂಬ ಕಾರಣಕ್ಕೆ ಬುಕಿಂಗ್ ರದ್ದುಪಡಿಸಲಾಗಿದೆ. ದುರ್ಗಿ ಉತ್ಸವದಲ್ಲಿ ಭಗವಾ ಧ್ವಜ ಹಾರಿಸದಿರಲು ಕಾರಣವೇನು? ಕೇಸರಿ ಬಣ್ಣದ ಮೇಲೆ ಅವರಿಗೆ ತಾತ್ಸಾರವೇಕೆ? ಇದನ್ನು ಗಮನಿಸಿದರೆ ಅವರ ಮನಸ್ಥಿತಿ ತಿಳಿಯುತ್ತದೆ. ಆದ್ದರಿಂದ ಮೂಡಿಗೆರೆ ಪಟ್ಟಣದಲ್ಲಿ ನ. 24ರಂದು ಸನಾತನ ಮತ್ತು ಭಗವಾ ಧ್ವಜದ ಬಗ್ಗೆ ಜಾಗೃತಿ ಮೂಡಿಸಲು ಸನಾತನ ಹಿಂದೂ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಿಗೆರೆ</strong>: 'ದುರ್ಗಾದೇವಿ ಸಮಿತಿಯ ಸದಸ್ಯರೊಬ್ಬರ ಸೂಚನೆ ಮೇರೆಗೆ ಭಗವಾ ಧ್ವಜ ತೆರವುಗೊಳಿಸಿದ್ದೇನೆ’ ಎಂದು ಆರೋಹಿ ಸೌಂಡ್ ಸಿಸ್ಟಂ ಮಾಲಿಕ ಪ್ರವೀಣ್ ಪೂಜಾರಿ ಸ್ಷಷ್ಟಪಡಿಸಿದರು.</p>.<p>ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಮಹಾಗಣಪತಿ ಹಾಗೂ ದುರ್ಗಾದೇವಿ ಉತ್ಸವಕ್ಕೆ ಲೈಟಿಂಗ್ಸ್, ಸೌಂಡ್ ಸಿಸ್ಟಂ ಹಾಕಲು ನನಗೆ ಗುತ್ತಿಗೆ ನೀಡಲಾಗಿತ್ತು. ಗಣಪತಿ ವಿಸರ್ಜನೆ ಆದ ಮೇಲೆ ದುರ್ಗಾದೇವಿ ಸಮಿತಿ ಸದಸ್ಯರಾದ ಶಂಕರ್ ಎಂಬುವರು ದುರ್ಗಿ ಉತ್ಸವಕ್ಕೆ ಲೈಟಿಂಗ್ಸ್ ಅಳವಡಿಸಲು ಭಗವಾ ಧ್ವಜ ತೆರವುಗೊಳಿಸಲು ಸೂಚಿಸಿದ್ದರು. ಆದ್ದರಿಂದ ನಾನು ಭಗವಾ ಧ್ವಜ ತೆರವುಗೊಳಿಸಿದ್ದೇನೆ. ಆದರೆ, ಗಣಪತಿ ಸಮಿತಿಯವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ದುರ್ಗಿ ಸಮಿತಿಯ ಸದಸ್ಯರೊಬ್ಬರು ಮಾಡಿದ ತಪ್ಪನ್ನು ನನ್ನ ಮೇಲೆ ಹಾಕಿದ್ದಾರೆ. ಈ ಬಗ್ಗೆ ತಾನು ಯಾವ ದೇವರ ಬಳಿ ಬೇಕಾದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ದುರ್ಗಿ ಸಮಿತಿಯವರು ಭಗವಾ ಧ್ವಜ ತೆರವುಗೊಳಿಸಲು ಸೂಚಿಸಿಲ್ಲ ಎಂದಾದರೆ ಅವರು ಕೂಡ ದೇವರ ಬಳಿ ಬಂದು ಪ್ರಮಾಣ ಮಾಡಬೇಕು' ಎಂದು ಒತ್ತಾಯಿಸಿದರು.</p>.<p>ಬಿಜೆಪಿ ಯುವ ಮೋರ್ಚಾದ ತಾಲ್ಲೂಕು ಘಟಕದ ಅಧ್ಯಕ್ಷ ಅವಿನಾಶ್ ಮಾತನಾಡಿ, 'ಬಣಕಲ್ನಲ್ಲಿದ್ದ ಗೊಂಬೆ ಕುಣಿತದ ತಂಡವೊಂದಕ್ಕೆ ದುರ್ಗಿ ವಿಸರ್ಜನೆಗೆ ಮುಂಗಡ ನೀಡಲಾಗಿತ್ತು. ಆದರೆ, ಆ ತಂಡ ಕೇಸರಿ ಬಣ್ಣದ ವಸ್ತ್ರ ಧರಿಸುತ್ತಾರೆ ಎಂಬ ಕಾರಣಕ್ಕೆ ಬುಕಿಂಗ್ ರದ್ದುಪಡಿಸಲಾಗಿದೆ. ದುರ್ಗಿ ಉತ್ಸವದಲ್ಲಿ ಭಗವಾ ಧ್ವಜ ಹಾರಿಸದಿರಲು ಕಾರಣವೇನು? ಕೇಸರಿ ಬಣ್ಣದ ಮೇಲೆ ಅವರಿಗೆ ತಾತ್ಸಾರವೇಕೆ? ಇದನ್ನು ಗಮನಿಸಿದರೆ ಅವರ ಮನಸ್ಥಿತಿ ತಿಳಿಯುತ್ತದೆ. ಆದ್ದರಿಂದ ಮೂಡಿಗೆರೆ ಪಟ್ಟಣದಲ್ಲಿ ನ. 24ರಂದು ಸನಾತನ ಮತ್ತು ಭಗವಾ ಧ್ವಜದ ಬಗ್ಗೆ ಜಾಗೃತಿ ಮೂಡಿಸಲು ಸನಾತನ ಹಿಂದೂ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>