‘ಕ್ಷೇತ್ರದ ಶಾಸಕ ಗೋಮುಖ ವ್ಯಾಘ್ರ’
ಬಿಜೆಪಿಯವರಿಗೆ ಏನು ಕೆಲಸವಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ಹೇಳುತ್ತಾರೆ. ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಅಪರೂಪದ ರಾಜಕಾರಣಿ ನಮ್ಮ ಶಾಸಕರು. ಅವರಿಗೆ ತುಂಬಾ ಕೆಲಸವಿದೆ. ಬಿಜೆಪಿಯವರಿಗೆ ಏನು ಕೆಲಸವಿಲ್ಲ. ನಾವು ಸದಾ ಜನಪರ ಕೆಲಸ ಮಾಡುತ್ತಿದ್ದೇವೆ ವಿನ: ರಣಹದ್ದುಗಳಲ್ಲ. ಆದರೆ ಶಾಸಕರು ಗೋಮುಖ ವ್ಯಾಘ್ರ ಎಂದು ಮಾಜಿ ಶಾಸಕ ಡಿ.ಎನ್ ಜೀವರಾಜ್ ದೂರಿದರು. ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಅನ್ನು ಜಲಜೀವನ್ ಕಮಿಷನ್ ಆಗಿ ಬದಲಾವಣೆ ಮಾಡಿಕೊಂಡಿದ್ದಾರೆ. ಕಾಡಾನೆಗೆ 13 ಜನ ಬಲಿಯಾದರೂ ಅವರಿಗೆ ಕಾಳಜಿ ಇಲ್ಲ ಎಂದು ಮಾಜಿ ಶಾಸಕ ಡಿ.ಎನ್ ಜೀವರಾಜ್ ಆರೋಪಿಸಿದರು.