ಈ ಸೇತುವೆ ಬಳಸಿ ಪ್ರತಿದಿನವೂ ಅಬ್ಬುಗುಡಿಗೆ, ಚಿಕ್ಕುಡಿಗೆ, ಕಲ್ಲುಗೋಡು, ಮಕ್ಕಿಮನೆ, ಬಸವನತೋಟ, ಹೊಸೂರು, ಕೊಳಮೆಗೆ, ಎಸ್.ಕೆ.ಮೇಗಲ್, ಕಳಕೋಡು, ಆನಮಗೆ, ಚಿಪ್ಪಲಮಗೆ, ಕಾರ್ಲೆ ಮುಂತಾದ ಪ್ರದೇಶದ ನೂರಾರು ಗ್ರಾಮಸ್ಥರು ಹಾದು ಹೋಗುತ್ತಾರೆ. ಮಳೆಗಾಲದಲ್ಲಂತೂ ತುಂಬಿ ಹರಿಯುವ ಭದ್ರಾ ನದಿಯು ಈ ಸೇತುವೆ ದಾಟುವವರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ.