‘ತಡೆಗೋಡೆ ಕುಸಿತ ಜಾಗದಲ್ಲಿ ಎಚ್ಚರಿಕೆಗಾಗಿ ಬ್ಯಾರಿಕೇಡ್ ಹಾಕಲಾಗಿದೆ. ಸಂಚಾರಕ್ಕೆ ಯಾವುದೇ ಅಪಾಯವಿಲ್ಲ. ಈಗಾಗಲೇ ಕುಸಿತ ಜಾಗಕ್ಕೆ ಪ್ಲಾಸ್ಟಿಕ್ ಹೊದಿಸಿ, ಇನ್ನಷ್ಟು ಕುಸಿಯದಂತೆ ತಡೆಯಲಾಗುವುದು. ವಿಪರೀತ ಮಳೆಯಿಂದ ಮಣ್ಣಿನ ಜತೆ ತಡೆಗೋಡೆಯೂ ಕುಸಿದಿದೆ. ಮಳೆ ಬರುತ್ತಿರುವುದರಿಂದ ತಡೆಗೋಡೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು’ ಎಂದು ಮುನಿರಾಜ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.