ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಘಾಟಿ: ಬಸ್‌ ಸಂಚಾರಕ್ಕೆ ಅವಕಾಶ

Last Updated 17 ಮಾರ್ಚ್ 2021, 11:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ (‘ರಾಜಹಂಸ’, ‘ಐರಾವತ’, ‘ಅಂಬಾರಿ’ ನಿರ್ಬಂಧ) ಸಹಿತ ಕೆಲ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ (ಸಾಮಾನ್ಯ), ಆರು ಚಕ್ರದ ಲಾರಿ, ಟೆಂಪೊ ಟ್ರಾವಲರ್‌, ಅಂಬುಲೆನ್ಸ್‌, ಕಾರು, ಜೀಪು, ಮಿನಿ ವ್ಯಾನು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ನಿರ್ಬಂಧ: ಬುಲೆಟ್‌ ಟ್ಯಾಂಕರ್ಸ್‌, ಷಿಪ್‌ ಕಾರ್ಗೊ, ಕಂಟೈನರ್ಸ್‌, ಲಾಂಗ್‌ ಚಾಸೀಸ್‌ ವಾಹನಗಳ, ಟ್ರಕ್‌ ಟ್ರೈಲರ್‌, ಮಲ್ಟಿ ಆ್ಯಕ್ಸಲ್‌ ಟ್ರಕ್‌, ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌, ಅಧಿಕ ಭಾರದ ಸರಕು ಸಾಗಣೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದ್ದಾರೆ.

ಮಳೆಯಿಂದಾಗಿ ಮಾರ್ಗದ ಕೆಲವು ಕಡೆ ಗುಡ್ಡದ ಮಣ್ಣು ಕುಸಿದು ರಸ್ತೆ ಹಾಳಾಗಿದ್ದರಿಂದ ಒಂದೂವರೆ ವರ್ಷದಿಂದ ಈ ಮಾರ್ಗದಲ್ಲಿ ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT