<p><strong>ತರೀಕೆರೆ</strong>: ಇಲ್ಲಿನ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ವಾರ್ಷಿಕ ಸಭೆಯು ಪಟ್ಟಣದ ಶಾರದಾ ಭವನದಲ್ಲಿ ಶುಕ್ರವಾರ ನಡೆಯಿತು.</p>.<p>‘ಸಹಕಾರಿ ಸಂಘದ ನಿಯಾಮವಳಿ ಮೀರಿ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ಎಂ.ನರೇಂದ್ರ ವಹಿಸಿಕೊಂಡಿರುವುದು ಸರಿಯಾದ ಕ್ರಮವಲ್ಲ. ನಿಯಮದ ಪ್ರಕಾರ ಎಚ್.ಪರಶುರಾಮ್ ಅಧ್ಯಕ್ಷತೆ ವಹಿಸಿಕೊಂಡು ಸಭೆ ನಡೆಸಬೇಕು’ ಎಂದು ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಟಿ.ಎಲ್.ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು.</p>.<p>ನಂತರ ಸಹಕಾರಿ ಸಂಘದ ಉಪಾಧ್ಯಕ್ಷ ಪರಶುರಾಮ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ನಂತರ ಮಾತನಾಡಿದ ಅವರು, ‘ಸಂಘವು ₹ 10.12 ಕೋಟಿ ಬೆಳೆ ಸಾಲ ನೀಡಿದೆ ಹಾಗೂ ದ್ವಿ ಚಕ್ರ ವಾಹನ ಸಾಲ, ಬಂಗಾರ ಸಾಲ, ಅಡಿಕೆ ಅಡಮಾನ ಸಾಲ ನೀಡಿದೆ’ ಎಂದರು.</p>.<p>ಸಂಘದ ಸದಸ್ಯರಾದ ಹಾಲು ವಜ್ರಪ್ಪ ಮಾತನಾಡಿ, ಅಡಿಟ್ ವರದಿಯಲ್ಲಿ ಹಲವಾರು ನ್ಯೂನತೆಗಳಿವೆ. ಅನುಪಾಲನಾ ವರದಿ ಸಕ್ಷಮ ಪ್ರಾಧಿಕಾರಕ್ಕೆ ದೂರು ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕುರಬ ಸಮಾಜದ ಅಧ್ಯಕ್ಷ ಪದ್ಮರಾಜ್, ಪುರಸಭೆ ಮಾಜಿ ಅಧ್ಯಕ್ಷ ಬೈಟು ರಮೇಶ್, ಈರಣ್ಣ,<br />ನಿರ್ದೇಶಕರಾದ ಎಂ.ನರೇಂದ್ರ, ರಾಮಚಂದ್ರಪ್ಪ, ಪ್ರಕಾಶ್ ವರ್ಮ, ಟಿ.ಜಿ.ಮಂಜುನಾಥ, ಗಿರಿರಾಜು, ಸುರೇಶ್, ರೇಣುಕಮ್ಮ, ಕಲಾವತಿ ಹಾಗೂ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ</strong>: ಇಲ್ಲಿನ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ವಾರ್ಷಿಕ ಸಭೆಯು ಪಟ್ಟಣದ ಶಾರದಾ ಭವನದಲ್ಲಿ ಶುಕ್ರವಾರ ನಡೆಯಿತು.</p>.<p>‘ಸಹಕಾರಿ ಸಂಘದ ನಿಯಾಮವಳಿ ಮೀರಿ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ಎಂ.ನರೇಂದ್ರ ವಹಿಸಿಕೊಂಡಿರುವುದು ಸರಿಯಾದ ಕ್ರಮವಲ್ಲ. ನಿಯಮದ ಪ್ರಕಾರ ಎಚ್.ಪರಶುರಾಮ್ ಅಧ್ಯಕ್ಷತೆ ವಹಿಸಿಕೊಂಡು ಸಭೆ ನಡೆಸಬೇಕು’ ಎಂದು ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಟಿ.ಎಲ್.ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು.</p>.<p>ನಂತರ ಸಹಕಾರಿ ಸಂಘದ ಉಪಾಧ್ಯಕ್ಷ ಪರಶುರಾಮ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ನಂತರ ಮಾತನಾಡಿದ ಅವರು, ‘ಸಂಘವು ₹ 10.12 ಕೋಟಿ ಬೆಳೆ ಸಾಲ ನೀಡಿದೆ ಹಾಗೂ ದ್ವಿ ಚಕ್ರ ವಾಹನ ಸಾಲ, ಬಂಗಾರ ಸಾಲ, ಅಡಿಕೆ ಅಡಮಾನ ಸಾಲ ನೀಡಿದೆ’ ಎಂದರು.</p>.<p>ಸಂಘದ ಸದಸ್ಯರಾದ ಹಾಲು ವಜ್ರಪ್ಪ ಮಾತನಾಡಿ, ಅಡಿಟ್ ವರದಿಯಲ್ಲಿ ಹಲವಾರು ನ್ಯೂನತೆಗಳಿವೆ. ಅನುಪಾಲನಾ ವರದಿ ಸಕ್ಷಮ ಪ್ರಾಧಿಕಾರಕ್ಕೆ ದೂರು ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕುರಬ ಸಮಾಜದ ಅಧ್ಯಕ್ಷ ಪದ್ಮರಾಜ್, ಪುರಸಭೆ ಮಾಜಿ ಅಧ್ಯಕ್ಷ ಬೈಟು ರಮೇಶ್, ಈರಣ್ಣ,<br />ನಿರ್ದೇಶಕರಾದ ಎಂ.ನರೇಂದ್ರ, ರಾಮಚಂದ್ರಪ್ಪ, ಪ್ರಕಾಶ್ ವರ್ಮ, ಟಿ.ಜಿ.ಮಂಜುನಾಥ, ಗಿರಿರಾಜು, ಸುರೇಶ್, ರೇಣುಕಮ್ಮ, ಕಲಾವತಿ ಹಾಗೂ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>