ಚಿಕ್ಕಮಗಳೂರು: ಪೊಲೀಸರು ಮತ್ತು ವಕೀಲರು ನಡುವಿನ ಗಲಭೆ ಪ್ರಕರಣ ತನಿಖೆಯನ್ನು ಸಿಐಡಿ ತಂಡ ಆರಂಭಿಸಿದೆ.
ಸಿಐಡಿ ಎಸ್ಪಿ ಎನ್.ವೆಂಕಟೇಶ್ ಮೇಲುಸ್ತುವಾರಿ ವಹಿಸಲಿದ್ದು, ಡಿವೈಎಸ್ಪಿ ಎಂ.ಎಚ್.ಉಮೇಶ್ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸಲಹೆಗಾರ ಆರ್.ಕೆ.ಕಾಳೆ ತಂಡದಲ್ಲಿದ್ದಾರೆ.
ಬುಧವಾರ ಬಂದಿಳಿದ ತಂಡ, ಪ್ರವಾಸಿ ಮಂದಿರದಲ್ಲಿ ಕಡತ ಪರಿಶೀಲನೆ ಆರಂಭಿಸಿದೆ.