‘ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಕೆಲವರು ಸಲಹೆ ನೀಡಿದ್ದರು. ಆದರೆ, ಸರ್ಕಾರಿ ಆಸ್ಪತ್ರೆಗೇ ದಾಖಲಾದೆ. ವಾರ್ಡ್ಗಳನ್ನು ನೀಟಾಗಿ ಇಟ್ಟಿದ್ದಾರೆ. ರೋಗಿಗಳೊಂದಿಗೆ ವೈದ್ಯರು, ಸಿಬ್ಬಂದಿ ತಾಳ್ಮೆಯಿಂದ ನಡೆದುಕೊಳ್ಳುತ್ತಾರೆ. ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್ ಕುಮಾರ್, ತಜ್ಞವೈದ್ಯರಾದ ಶ್ರೀನಿವಾಸ್, ವಿನಯ್, ಸೌಮ್ಯಾ ಸುನೀಲ್ ಮೊದಲಾದವರು ಚಿಕಿತ್ಸೆ ನೀಡುತ್ತಾರೆ. ರೋಗಿಗಳನ್ನು ಮುಟ್ಟಿ ಪರೀಕ್ಷಿಸುತ್ತಾರೆ. ಚಿಕಿತ್ಸೆ ಜತೆಗೆ ಆತ್ಮವಿಶ್ವಾಸ ತುಂಬುತ್ತಾರೆ. ಕೊರೊನಾ ವಾರಿಯರ್ಸ್ಗಳೇ ನಿಜವಾದ ದೇವರು, ಅವರಿಗೆ ನಾವೆಲ್ಲರೂ ಕೈಮುಗಿಯಬೇಕು’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.