ಸಿ.ಟಿ.ರವಿ ಪ್ರವಾಸೋದ್ಯಮ ಸಚಿವರಾಗಿದ್ದಾಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹1 ಕೋಟಿ ಅನುದಾನ ಒದಗಿಸಿದ್ದು, ಅಡಿಪಾಯದಿಂದ ಶಿಖರದವರೆಗೆ ಪುನರ್ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲಿ ದೇವಸ್ಥಾನ ಪ್ರಾರಂಭೋತ್ಸವ ನಡೆಯಲಿದೆ. ಆದರೆ, ಇಲ್ಲಿ ತಲುಪುವ 1.5 ಕಿ.ಮೀ ರಸ್ತೆ ತೀರಾ ದುಃಸ್ಥಿತಿಯಲ್ಲಿದ್ದು, ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ದೇವಸ್ಥಾನ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಮನೋಹರ್, ಕೇಶವಮೂರ್ತಿ, ಶಶಿಧರ್, ಸುಬ್ಬೆಗೌಡ, ಅರ್ಚಕ ಪೋಸ್ಟ್ ಮ್ಯಾನ್ ಚಂದ್ರಣ್ಣ, ನಾರಾಯಣಗೌಡ ಒತ್ತಾಯಿಸಿದ್ದಾರೆ.