‘ನಮ್ಮ ಊರಿಗೆ ಕುಡಿಯುವ ನೀರಿಗೆ ಕಟ್ಟಿದ್ದ ಟ್ಯಾಂಕ್ ಜಖಂ ಆಗಿದೆ. ತೊಟ್ಟಿಯಲ್ಲಿ ನೀರು ನಿಲ್ಲುತ್ತಿಲ್ಲ. ಈಗ ಮೂರು ಕಿಲೋ ಮೀಟರ್ ದೂರದಿಂದ ನೀರು ಹೊತ್ತು ತರಬೇಕಾಗಿದೆ. ನಮ್ಮ ಊರಿನ ಜನರಿಗೆ ನೀರಿನ ಸೌಲಭ್ಯ ಕೊಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಅನುದಾನ ಇಲ್ಲ ಎನ್ನುತ್ತಾರೆ. ಬೇರೆಲ್ಲ ಊರಲ್ಲೂ ನೀರು, ರಸ್ತೆ ಸೌಲಭ್ಯ ಇದೆ. ಆದರೆ, ನಮ್ಮ ಊರಲ್ಲಿ ನೀರೂ ಇಲ್ಲ, ರಸ್ತೆನೂ ಇಲ್ಲ’ ಎಂದು ಮೀನಾಕ್ಷಿ ಆಕ್ರೋಶದಿಂದ ಹೇಳಿದರು.