<p><strong>ನರಸಿಂಹರಾಜಪುರ</strong>: ‘ಕ್ರೋಧಿ ನಾಮ ಸಂವತ್ಸರದಲ್ಲಿ ಮಳೆ ಕಡಿಮೆಯಾಗಲಿದೆ’ ಎಂದು ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಸಿಂಹನಗದ್ದೆ ಬಸ್ತಿಮಠದಲ್ಲಿ ಯುಗಾದಿಯ ಅಂಗವಾಗಿ ಬಸ್ತಿಮಠದ 1008 ಚಂದ್ರಪ್ರಭ ತೀರ್ಥಂಕರ ಬಸದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಂಚಾಂಗ ಶ್ರವಣ ಮಾಡಿದರು.</p>.<p>‘ಈ ವರ್ಷ 20 ಕೊಳಗ ಮಳೆ ಮಾತ್ರ ಬರಲಿದೆ. ಅದರಲ್ಲಿ 10 ಕೊಳಗ ಮಳೆ ಸಮದ್ರದಲ್ಲಿ ಸುರಿಯಲಿದೆ. 6 ಕೊಳಗ ಬೆಟ್ಟಗಳಲ್ಲಿ ಬಿದ್ದು ವ್ಯರ್ಥವಾಗಲಿದೆ. ಜನರಿಗೆ ಸಿಗುವುದು ಕೇವಲ 4 ಕೊಳಗ ಮಳೆ ಮಾತ್ರ’ ಎಂದರು. ಕ್ರೋಧಿ ನಾಮ ಸಂವತ್ಸರದಲ್ಲಿ ಒಳ್ಳೆ ಫಲಕ್ಕಿಂತ ಕೆಟ್ಟ ಫಲವೇ ಜಾಸ್ತಿಯಾಗಲಿದೆ. ಪರಸ್ಪರ ವಿರಸ, ಹಾನಿ ಜಾಸ್ತಿಯಾಗಲಿದೆ’ ಎಂದರು. </p>.<p>ಜೈನ ಸಂಪ್ರದಾಯದ ಪ್ರಕಾರ ಭಗವಾನ್ ಆದಿನಾಥ ತೀರ್ಥಂಕರರು ಚತುರ್ಥ ಕಾಲ ಮುಗಿಸಿ ಪಂಚಮ ಕಾಲ ಸಮೀಪಿಸುತ್ತಿದ್ದಂತೆ ಜನರ ಬದುಕಿಗೆ ಬೇಕಾದ ಅಸಿ, ಮಸಿ, ಕೃಷಿ, ಶಿಲ್ಪ ಮತ್ತು ವಾಣಿಜ್ಯ ಸೇರಿದ 5 ವಿಧ್ಯೆಗಳನ್ನು ತಿಳಿಸಿಕೊಟ್ಟ ದಿನವೇ ಯುಗಾದಿಯಾಗಿದೆ. ಆದ್ದರಿಂದ ಯುಗದ ಆದಿಯೇ ಯುಗಾದಿ ಎಂದರು. ಭಕ್ತರಿಗೆ ಬೇವು, ಬೆಲ್ಲ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ</strong>: ‘ಕ್ರೋಧಿ ನಾಮ ಸಂವತ್ಸರದಲ್ಲಿ ಮಳೆ ಕಡಿಮೆಯಾಗಲಿದೆ’ ಎಂದು ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಸಿಂಹನಗದ್ದೆ ಬಸ್ತಿಮಠದಲ್ಲಿ ಯುಗಾದಿಯ ಅಂಗವಾಗಿ ಬಸ್ತಿಮಠದ 1008 ಚಂದ್ರಪ್ರಭ ತೀರ್ಥಂಕರ ಬಸದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಂಚಾಂಗ ಶ್ರವಣ ಮಾಡಿದರು.</p>.<p>‘ಈ ವರ್ಷ 20 ಕೊಳಗ ಮಳೆ ಮಾತ್ರ ಬರಲಿದೆ. ಅದರಲ್ಲಿ 10 ಕೊಳಗ ಮಳೆ ಸಮದ್ರದಲ್ಲಿ ಸುರಿಯಲಿದೆ. 6 ಕೊಳಗ ಬೆಟ್ಟಗಳಲ್ಲಿ ಬಿದ್ದು ವ್ಯರ್ಥವಾಗಲಿದೆ. ಜನರಿಗೆ ಸಿಗುವುದು ಕೇವಲ 4 ಕೊಳಗ ಮಳೆ ಮಾತ್ರ’ ಎಂದರು. ಕ್ರೋಧಿ ನಾಮ ಸಂವತ್ಸರದಲ್ಲಿ ಒಳ್ಳೆ ಫಲಕ್ಕಿಂತ ಕೆಟ್ಟ ಫಲವೇ ಜಾಸ್ತಿಯಾಗಲಿದೆ. ಪರಸ್ಪರ ವಿರಸ, ಹಾನಿ ಜಾಸ್ತಿಯಾಗಲಿದೆ’ ಎಂದರು. </p>.<p>ಜೈನ ಸಂಪ್ರದಾಯದ ಪ್ರಕಾರ ಭಗವಾನ್ ಆದಿನಾಥ ತೀರ್ಥಂಕರರು ಚತುರ್ಥ ಕಾಲ ಮುಗಿಸಿ ಪಂಚಮ ಕಾಲ ಸಮೀಪಿಸುತ್ತಿದ್ದಂತೆ ಜನರ ಬದುಕಿಗೆ ಬೇಕಾದ ಅಸಿ, ಮಸಿ, ಕೃಷಿ, ಶಿಲ್ಪ ಮತ್ತು ವಾಣಿಜ್ಯ ಸೇರಿದ 5 ವಿಧ್ಯೆಗಳನ್ನು ತಿಳಿಸಿಕೊಟ್ಟ ದಿನವೇ ಯುಗಾದಿಯಾಗಿದೆ. ಆದ್ದರಿಂದ ಯುಗದ ಆದಿಯೇ ಯುಗಾದಿ ಎಂದರು. ಭಕ್ತರಿಗೆ ಬೇವು, ಬೆಲ್ಲ ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>