ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮತ್ತೋಡಿ ವಲಯದ ವಾಟೆಹಳ್ಳ ಪ್ರದೇಶದಲ್ಲಿ ಶುಕ್ರವಾರ ಮರಿ ಆನೆಯ ಕಳೆಬರ ಪತ್ತೆಯಾಗಿದೆ.
‘ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಆನೆ ಕಾಣಿಸಿದೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 2 ವರ್ಷ ಪ್ರಾಯದ ಮರಿ ಗಂಡಾನೆ ಕಳೆಬರ ಪತ್ತೆಯಾಗಿದೆ. ಅದು ಮೃತಪಟ್ಟು ನಾಲ್ಕು ದಿನಗಳಾಗಿಬಹುದು. ಶನಿವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ’ ಎಂದು ಅರಣ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.