<p><strong>ಅಜ್ಜಂಪುರ: </strong>ಬಯಲು ಸೀಮೆಯ ದೊಡ್ಡ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ‘ದುರ್ಗಾಂಬಾ ದೇವಿ’ ರಥೋತ್ಸವ ತಾಲ್ಲೂಕಿನ ಅಂತರಗಟ್ಟೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬೆಳಿಗ್ಗೆ ನೆರವೇರಿತು.</p>.<p>ರಥೋತ್ಸವ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಸಾವಿರಾರು ಭಕ್ತರು ಜಯಘೋಷ, ಚಪ್ಪಾಳೆ ಹಾಕಿ ಹರ್ಷೋದ್ಘಾರ ಮಾಡಿದರು. ಬಾಳೆಹಣ್ಣು, ನಿಂಬೆಹಣ್ಣನ್ನು ರಥದ ಕಳಸದತ್ತ ಎಸೆದು ಸಂಭ್ರಮಿಸಿದರು. ಬಳಿಕ ರಥದ ಮೇಲಿದ್ದ ದೇವಿಗೆ ಹೂ-ಹಣ್ಣು ಸಮರ್ಪಿಸಿ, ಭಕ್ತಿ ಮೆರೆದರು.</p>.<p>ಜಾತ್ರಾ ಮಹೋತ್ಸವ ಅಂಗವಾಗಿ ದುರ್ಗಾಂಬೆ, ಮಾರಾಳಮ್ಮ ದೇವಿ, ಮಾತಂಗೆಮ್ಮ, ಗೋಣಿ ಮರದಮ್ಮ ದೇವಿ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಗಿತ್ತು. ಬಂದಿದ್ದವರು ಸರತಿ ಸಾಲಿನಲ್ಲಿ ದೇವಾಲಯ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿತ್ತು.</p>.<p>ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಂದಲೂ ಭಕ್ತರು ಬಂದಿದ್ದರು. ಬಸ್ಗಳಲ್ಲದೇ ಸಾವಿರಾರು ಎತ್ತಿನ ಬಂಡಿ, ನೂರಾರು ಟ್ರ್ಯಾಕ್ಟರ್, ಟ್ರಕ್, ಆಟೊಗಳಲ್ಲಿ ಸಾವಿರಾರು ಜನ ಬಂದಿದ್ದರು.</p>.<p>ಉಪವಿಭಾಗಾಧಿಕಾರಿ ರೂಪಾ, ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ಶಾಸಕ ಡಿ.ಎಸ್. ಸುರೇಶ್ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಪೊಲೀಸ್, ಗೃಹ ರಕ್ಷಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು.</p>.<p>ಸ್ಥಳೀಯ ಗ್ರಾಮ ಪಂಚಾಯಿತಿಯು ರಸ್ತೆ ದೂಳು ಅಡಗಿಸಲು ಟ್ರ್ಯಾಕ್ಟರ್ ಮೂಲಕ ನೀರು ಪೂರೈಸಲಾಗಿತ್ತು. ಜಾನುವಾರಿಗೆ ತೊಟ್ಟಿಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜನರಿಗೂ ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮಕೈಗೊಂಡಿತ್ತು.</p>.<p>ಮುಖ್ಯ ರಸ್ತೆಯಿಂದ ದೇವಾಲಯ ಕಡೆಗೆ ಸಾಗುವ ವಾಹನಗಳಿಗೆ ಪ್ರತ್ಯೇಕ ಮಾರ್ಗ ಕಲ್ಪಿಸದೇ ಇರುವುದರಿಂದ ವಾಹನ, ಜನದಟ್ಟಣೆ ಪರದಾಡುವಂತಾಯಿತು ಎಂದು ಭದ್ರಾವತಿಯ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>ದೇವಾಲಯ ಪ್ರವೇಶಿಸುವ ರಸ್ತೆಯಲ್ಲಿಯೇ ಕೋಳಿ ಅಂಗಡಿ ತೆರೆಯಲಾಗಿದೆ. ಕೋಳಿ ತ್ಯಾಜ್ಯದಿಂದ ಹೊರ ಬರುತ್ತಿದ್ದ ದುರ್ವಾಸನೆ ಮೂಗು ಮುಚ್ಚಿ ಸಾಗುವಂತೆ ಮಾಡಿದೆ. ಮುಂದಿನ ವರ್ಷ, ಕೋಳಿ ಮಾರಾಟಕ್ಕೆ ಮುಖ್ಯರಸ್ತೆಗೆ ಬದಲು ಅನತಿ ದೂರದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ಹನುಮಂತಪ್ಪ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಜ್ಜಂಪುರ: </strong>ಬಯಲು ಸೀಮೆಯ ದೊಡ್ಡ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ‘ದುರ್ಗಾಂಬಾ ದೇವಿ’ ರಥೋತ್ಸವ ತಾಲ್ಲೂಕಿನ ಅಂತರಗಟ್ಟೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬೆಳಿಗ್ಗೆ ನೆರವೇರಿತು.</p>.<p>ರಥೋತ್ಸವ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಸಾವಿರಾರು ಭಕ್ತರು ಜಯಘೋಷ, ಚಪ್ಪಾಳೆ ಹಾಕಿ ಹರ್ಷೋದ್ಘಾರ ಮಾಡಿದರು. ಬಾಳೆಹಣ್ಣು, ನಿಂಬೆಹಣ್ಣನ್ನು ರಥದ ಕಳಸದತ್ತ ಎಸೆದು ಸಂಭ್ರಮಿಸಿದರು. ಬಳಿಕ ರಥದ ಮೇಲಿದ್ದ ದೇವಿಗೆ ಹೂ-ಹಣ್ಣು ಸಮರ್ಪಿಸಿ, ಭಕ್ತಿ ಮೆರೆದರು.</p>.<p>ಜಾತ್ರಾ ಮಹೋತ್ಸವ ಅಂಗವಾಗಿ ದುರ್ಗಾಂಬೆ, ಮಾರಾಳಮ್ಮ ದೇವಿ, ಮಾತಂಗೆಮ್ಮ, ಗೋಣಿ ಮರದಮ್ಮ ದೇವಿ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಗಿತ್ತು. ಬಂದಿದ್ದವರು ಸರತಿ ಸಾಲಿನಲ್ಲಿ ದೇವಾಲಯ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿತ್ತು.</p>.<p>ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಂದಲೂ ಭಕ್ತರು ಬಂದಿದ್ದರು. ಬಸ್ಗಳಲ್ಲದೇ ಸಾವಿರಾರು ಎತ್ತಿನ ಬಂಡಿ, ನೂರಾರು ಟ್ರ್ಯಾಕ್ಟರ್, ಟ್ರಕ್, ಆಟೊಗಳಲ್ಲಿ ಸಾವಿರಾರು ಜನ ಬಂದಿದ್ದರು.</p>.<p>ಉಪವಿಭಾಗಾಧಿಕಾರಿ ರೂಪಾ, ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ಶಾಸಕ ಡಿ.ಎಸ್. ಸುರೇಶ್ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಪೊಲೀಸ್, ಗೃಹ ರಕ್ಷಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು.</p>.<p>ಸ್ಥಳೀಯ ಗ್ರಾಮ ಪಂಚಾಯಿತಿಯು ರಸ್ತೆ ದೂಳು ಅಡಗಿಸಲು ಟ್ರ್ಯಾಕ್ಟರ್ ಮೂಲಕ ನೀರು ಪೂರೈಸಲಾಗಿತ್ತು. ಜಾನುವಾರಿಗೆ ತೊಟ್ಟಿಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜನರಿಗೂ ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮಕೈಗೊಂಡಿತ್ತು.</p>.<p>ಮುಖ್ಯ ರಸ್ತೆಯಿಂದ ದೇವಾಲಯ ಕಡೆಗೆ ಸಾಗುವ ವಾಹನಗಳಿಗೆ ಪ್ರತ್ಯೇಕ ಮಾರ್ಗ ಕಲ್ಪಿಸದೇ ಇರುವುದರಿಂದ ವಾಹನ, ಜನದಟ್ಟಣೆ ಪರದಾಡುವಂತಾಯಿತು ಎಂದು ಭದ್ರಾವತಿಯ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>ದೇವಾಲಯ ಪ್ರವೇಶಿಸುವ ರಸ್ತೆಯಲ್ಲಿಯೇ ಕೋಳಿ ಅಂಗಡಿ ತೆರೆಯಲಾಗಿದೆ. ಕೋಳಿ ತ್ಯಾಜ್ಯದಿಂದ ಹೊರ ಬರುತ್ತಿದ್ದ ದುರ್ವಾಸನೆ ಮೂಗು ಮುಚ್ಚಿ ಸಾಗುವಂತೆ ಮಾಡಿದೆ. ಮುಂದಿನ ವರ್ಷ, ಕೋಳಿ ಮಾರಾಟಕ್ಕೆ ಮುಖ್ಯರಸ್ತೆಗೆ ಬದಲು ಅನತಿ ದೂರದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ಹನುಮಂತಪ್ಪ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>