<p><strong>ಚಿಕ್ಕಮಗಳೂರು</strong>: ನಗರದ ಬಸ್–ರೈಲು ನಿಲ್ದಾಣ, ರಸ್ತೆಗಳು, ಪಾದಚಾರಿ ಮಾರ್ಗಗಳು ಇತರೆಡೆಗಳಲ್ಲಿ ಅಲೆದಾಡುತ್ತಿದ್ದ ನಿರ್ಗತಿಕರನ್ನು ಸ್ವಯಂಸೇವಕರು ಕರೆತಂದು ತಂಗಲು ಗೂಡಿನ ವ್ಯವಸ್ಥೆ ಮಾಡಿ, ಆಹಾರ ನೀಡಿ ಮಾನವೀಯ ಮುಖ ತೋರಿದ್ದಾರೆ.</p>.<p>ಕೊರೊನಾ ವೈರಾಣು ಹರಡದಂತೆ ತಡೆ ನಿಟ್ಟಿನಲ್ಲಿ ಲಾಕ್ಡೌನ್ನಿಂದಾಗಿ ಅಂಗಡಿ, ಮಳಿಗೆ, ಹೋಟೆಲ್, ಲಾಡ್ಜ್ ಮುಚ್ಚಿದ್ದು ನಗರ ಸ್ತಬ್ಧವಾಗಿದೆ. ಜನರನ್ನು ಕಾಡಿಬೇಡಿ ಬದುಕು ಸಾಗಿಸುವ ಭಿಕ್ಷಕರು, ನಿರ್ಗತಿಕರು ಆಹಾರಕ್ಕಾಗಿ ಪರದಾಡುವಂತಾಗಿದ್ದು, ಸ್ವಯಂಸೇವಕರು ಅವರಿಗೆ ಈಗ ನೆರವಿನ ಹಸ್ತ ಚಾಚಿದ್ದಾರೆ.</p>.<p>ಎಐಟಿ ವೃತ್ತದ ಬಳಿಯ ಅಂಬೇಡ್ಕರ್ ವಸತಿ ಶಾಲೆಯ ಪಡಸಾಲೆ, ಎರಡು ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಶುಕ್ರವಾರದಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ 30 ಮಂದಿ ಇದ್ದಾರೆ. ಇಲ್ಲಿರುವವರಿಗೆ ಪೊಲೀಸರು ಮುಖಗವುಸು (ಮಾಸ್ಕ್) ಒದಗಿಸಿದ್ದಾರೆ.<br />ನಗರಸಭೆ, ಪೊಲೀಸರು, ದಾನಿಗಳು, ಸ್ವಯಂಸೇವಾ ಸಂಸ್ಥೆಗಳ ನೆರವಿನಲ್ಲಿ ಉಪಹಾರ, ಊಟ, ಹೊದಿಕೆ, ಚಾಪೆ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಸ್ನಾನದ ಗೃಹಗಳ ಸೌಲಭ್ಯ ಇದೆ.</p>.<p>ನಿರ್ಗತಿಕರಿಗೆ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗಿದೆ. ವೈದ್ಯಕೀಯ ತಪಾಸಣೆ ಮಾಡಿಸಲು ಕ್ರಮ ವಹಿಸಿ, ನಿಗಾ ವಹಿಸಲಾಗುವುದು ಎಂದು ನಗರಸಭೆ ಪ್ರಭಾರ ಆಯುಕ್ತ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸ್ವಯಂ ಸೇವಕ ಕಾರ್ತಿಕ್ ಚೆಟ್ಟಿಯಾರ್, ರೂಬೆನ್ ಮೊಸೆಸ್ ಸಹಿತ 15 ಸ್ವಯಂ ಸೇವಕರು ನಿರ್ಗತಿಕರ ಮೇಲೆ ನಿಗಾ ವಹಿಸಿದ್ದಾರೆ.<br />‘ಮಹಿಳೆಯರಿಗೆ, ಪುರಷರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಒಬ್ಬರಿಂದ ಒಬ್ಬರಿಗೆ ಅಂತರ ಇರುವಂತೆ ಗಮನ ಹರಿಸಲಾಗಿದೆ. ವಾಸ್ತವ್ಯ, ಉಪಹಾರ, ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ರೂಬೆನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ನಗರದ ಬಸ್–ರೈಲು ನಿಲ್ದಾಣ, ರಸ್ತೆಗಳು, ಪಾದಚಾರಿ ಮಾರ್ಗಗಳು ಇತರೆಡೆಗಳಲ್ಲಿ ಅಲೆದಾಡುತ್ತಿದ್ದ ನಿರ್ಗತಿಕರನ್ನು ಸ್ವಯಂಸೇವಕರು ಕರೆತಂದು ತಂಗಲು ಗೂಡಿನ ವ್ಯವಸ್ಥೆ ಮಾಡಿ, ಆಹಾರ ನೀಡಿ ಮಾನವೀಯ ಮುಖ ತೋರಿದ್ದಾರೆ.</p>.<p>ಕೊರೊನಾ ವೈರಾಣು ಹರಡದಂತೆ ತಡೆ ನಿಟ್ಟಿನಲ್ಲಿ ಲಾಕ್ಡೌನ್ನಿಂದಾಗಿ ಅಂಗಡಿ, ಮಳಿಗೆ, ಹೋಟೆಲ್, ಲಾಡ್ಜ್ ಮುಚ್ಚಿದ್ದು ನಗರ ಸ್ತಬ್ಧವಾಗಿದೆ. ಜನರನ್ನು ಕಾಡಿಬೇಡಿ ಬದುಕು ಸಾಗಿಸುವ ಭಿಕ್ಷಕರು, ನಿರ್ಗತಿಕರು ಆಹಾರಕ್ಕಾಗಿ ಪರದಾಡುವಂತಾಗಿದ್ದು, ಸ್ವಯಂಸೇವಕರು ಅವರಿಗೆ ಈಗ ನೆರವಿನ ಹಸ್ತ ಚಾಚಿದ್ದಾರೆ.</p>.<p>ಎಐಟಿ ವೃತ್ತದ ಬಳಿಯ ಅಂಬೇಡ್ಕರ್ ವಸತಿ ಶಾಲೆಯ ಪಡಸಾಲೆ, ಎರಡು ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಶುಕ್ರವಾರದಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ 30 ಮಂದಿ ಇದ್ದಾರೆ. ಇಲ್ಲಿರುವವರಿಗೆ ಪೊಲೀಸರು ಮುಖಗವುಸು (ಮಾಸ್ಕ್) ಒದಗಿಸಿದ್ದಾರೆ.<br />ನಗರಸಭೆ, ಪೊಲೀಸರು, ದಾನಿಗಳು, ಸ್ವಯಂಸೇವಾ ಸಂಸ್ಥೆಗಳ ನೆರವಿನಲ್ಲಿ ಉಪಹಾರ, ಊಟ, ಹೊದಿಕೆ, ಚಾಪೆ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಸ್ನಾನದ ಗೃಹಗಳ ಸೌಲಭ್ಯ ಇದೆ.</p>.<p>ನಿರ್ಗತಿಕರಿಗೆ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗಿದೆ. ವೈದ್ಯಕೀಯ ತಪಾಸಣೆ ಮಾಡಿಸಲು ಕ್ರಮ ವಹಿಸಿ, ನಿಗಾ ವಹಿಸಲಾಗುವುದು ಎಂದು ನಗರಸಭೆ ಪ್ರಭಾರ ಆಯುಕ್ತ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸ್ವಯಂ ಸೇವಕ ಕಾರ್ತಿಕ್ ಚೆಟ್ಟಿಯಾರ್, ರೂಬೆನ್ ಮೊಸೆಸ್ ಸಹಿತ 15 ಸ್ವಯಂ ಸೇವಕರು ನಿರ್ಗತಿಕರ ಮೇಲೆ ನಿಗಾ ವಹಿಸಿದ್ದಾರೆ.<br />‘ಮಹಿಳೆಯರಿಗೆ, ಪುರಷರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಒಬ್ಬರಿಂದ ಒಬ್ಬರಿಗೆ ಅಂತರ ಇರುವಂತೆ ಗಮನ ಹರಿಸಲಾಗಿದೆ. ವಾಸ್ತವ್ಯ, ಉಪಹಾರ, ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ರೂಬೆನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>