<p><strong>ಕೊಪ್ಪ(ಚಿಕ್ಕಮಗಳೂರು):</strong> ಪಟ್ಟಣದಲ್ಲಿ ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಿರುವ ಸರಸ್ವತಿ ಅವರು ತಾಲ್ಲೂಕಿನ ಸೂರ್ಯದೇವಸ್ಥಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ₹20 ಸಾವಿರಕ್ಕೂ ಅಧಿಕ ಮೊತ್ತದ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ.</p>.<p>ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ಪೌಚ್, ಶಾಲಾ ಬ್ಯಾಗ್ ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಿತರಿಸಿದರು.</p>.<p>ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾಗಿರುವ ಶಿಕ್ಷಕ ಸುಕೇಶ್ ಮಾತನಾಡಿ, ‘ನಾವು ರೋಟರಿ ಕ್ಲಬ್ ವತಿಯಿಂದ ಈ ಹಿಂದೆ ಸರಸ್ವತಿ ಅವರಿಗೆ ಸಣ್ಣ ಸಹಾಯ ಮಾಡಿದ್ದೆವು. ಆದರೆ, ಅವರು ನಮ್ಮ ಶಾಲೆಗೆ ಅದರ ದುಪ್ಪಟ್ಟು ಮೌಲ್ಯದ ಕೊಡುಗೆ ನೀಡುವ ಮೂಲಕ ಸಮಾಜದ ಋಣ ತೀರಿಸಿದ್ದಾರೆ’ ಎಂದರು.</p>.<p>ಸರಸ್ವತಿ ಅವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು.</p>.<p>ಶಿಕ್ಷಣ ಸಂಪನ್ಮೂಲ ಕಚೇರಿಯ ಸುನೀತಾ, ಸಿಆರ್ಪಿ ಮಹಾಲಕ್ಷ್ಮಿ ಭಟ್, ಸ್ಥಳೀಯರಾದ ಕರುಣಾಕರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್, ಮುಖ್ಯ ಶಿಕ್ಷಕಿ ಮಲ್ಲಿಕಾ, ಸಹ ಶಿಕ್ಷಕಿ ಮೇಘನಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಾಗರತ್ನಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪ(ಚಿಕ್ಕಮಗಳೂರು):</strong> ಪಟ್ಟಣದಲ್ಲಿ ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಿರುವ ಸರಸ್ವತಿ ಅವರು ತಾಲ್ಲೂಕಿನ ಸೂರ್ಯದೇವಸ್ಥಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ₹20 ಸಾವಿರಕ್ಕೂ ಅಧಿಕ ಮೊತ್ತದ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ.</p>.<p>ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ಪೌಚ್, ಶಾಲಾ ಬ್ಯಾಗ್ ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಿತರಿಸಿದರು.</p>.<p>ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾಗಿರುವ ಶಿಕ್ಷಕ ಸುಕೇಶ್ ಮಾತನಾಡಿ, ‘ನಾವು ರೋಟರಿ ಕ್ಲಬ್ ವತಿಯಿಂದ ಈ ಹಿಂದೆ ಸರಸ್ವತಿ ಅವರಿಗೆ ಸಣ್ಣ ಸಹಾಯ ಮಾಡಿದ್ದೆವು. ಆದರೆ, ಅವರು ನಮ್ಮ ಶಾಲೆಗೆ ಅದರ ದುಪ್ಪಟ್ಟು ಮೌಲ್ಯದ ಕೊಡುಗೆ ನೀಡುವ ಮೂಲಕ ಸಮಾಜದ ಋಣ ತೀರಿಸಿದ್ದಾರೆ’ ಎಂದರು.</p>.<p>ಸರಸ್ವತಿ ಅವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು.</p>.<p>ಶಿಕ್ಷಣ ಸಂಪನ್ಮೂಲ ಕಚೇರಿಯ ಸುನೀತಾ, ಸಿಆರ್ಪಿ ಮಹಾಲಕ್ಷ್ಮಿ ಭಟ್, ಸ್ಥಳೀಯರಾದ ಕರುಣಾಕರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್, ಮುಖ್ಯ ಶಿಕ್ಷಕಿ ಮಲ್ಲಿಕಾ, ಸಹ ಶಿಕ್ಷಕಿ ಮೇಘನಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಾಗರತ್ನಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>