<p><strong>ಮೂಡಿಗೆರೆ: </strong>ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ.</p>.<p>ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಪ್ರಾರಂಭವಾದ ಮಳೆ ಒಂದು ತಾಸಿಗೂ ಅಧಿಕ ಕಾಲ ಧಾರಾಕಾರವಾಗಿ ಸುರಿಯಿತು. ಭತ್ತ, ಕಾಫಿ, ಶುಂಠಿ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಯಿತು.</p>.<p>ದಾರದಹಳ್ಳಿ, ಮಾಕೋನಹಳ್ಳಿ, ಜನ್ನಾಪುರ, ಬೆಟ್ಟದಮನೆ ಮುಂತಾದ ಭಾಗಗಳಲ್ಲಿ ಕಟಾವಾಗಿ ಕಣದಲ್ಲಿ ಒಣಗಿಸುತ್ತಿದ್ದ ಅರೇಬಿಕಾ ಕಾಫಿಯೆಲ್ಲವೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಗಿಡದಲ್ಲಿ ಹಣ್ಣಾಗಿದ್ದ ಕಾಫಿಯು ಮಳೆಯ ರಭಸಕ್ಕೆ ನೆಲಕಚ್ಚಿದೆ.</p>.<p>ಮಳೆಯಿಂದ ಕೊಳೆರೋಗಕ್ಕೆ ತುತ್ತಾಗಿದ್ದ ಶುಂಠಿ ಬೆಳೆಯಲ್ಲಿ ರೋಗವು ಉಲ್ಬಣಿಸುವ ಸಂಕಷ್ಟ ಎದುರಾಗಿದೆ. ಅಲ್ಲದೆ, ಭತ್ತದ ಬೆಳೆಯ ತೆನೆ ಒಡೆಯುತ್ತಿದ್ದು, ತೆನೆಯ ಮೇಲೆ ಮಳೆ ಸುರಿದಿದ್ದರಿಂದ ಜೊಳ್ಳಾಗುವ ಭೀತಿ ಉಂಟಾಗಿದೆ.</p>.<p class="Briefhead"><strong>ಕಡೂರಿನಲ್ಲಿ ಮಳೆ</strong></p>.<p><strong>ಕಡೂರು: </strong>ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಬಿರುಸಿನಿಂದ ಭಾರಿ ಮಳೆಯಾಯಿತು.</p>.<p>ಸಂಜೆ ಐದು ಗಂಟೆ ಹೊತ್ತಿಗೆ ಗುಡುಗು ಮಿಂಚಿನಿಂದ ಕೂಡಿ ಆರಂಭವಾದ ಹಸ್ತಾ ಮಳೆ ನಿರಂತರವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ರಸ್ತೆಗಳ ಮೇಲೆಲ್ಲ ನೀರು ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.</p>.<p>ರಾಗಿ ಬೆಳೆದ ರೈತರಿಗೆ ಈ ಮಳೆ ಅನುಕೂಲವಾಗಿದೆ. ಈರುಳ್ಳಿ ಕಟಾವು ಮಾಡಿದ ರೈತರಿಗೆ ತುಸು ತೊಂದರೆಯಾಯಿತು. ಸುರಿವ</p>.<p class="Briefhead"><strong>ಅಬ್ಬರದ ಮಳೆ</strong></p>.<p><strong>ಬೀರೂರು: </strong>ಪಟ್ಟಣ ಮತ್ತು ಸುತ್ತಮುತ್ತ ಸೋಮವಾರ ಸಂಜೆ ಒಂದು ತಾಸಿಗೂ ಹೆಚ್ಚು ಮಳೆ ಸುರಿದು ಇಳೆಯನ್ನು ತಂಪಾಗಿಸಿದೆ.</p>.<p>ಹಲವು ರೈತರು ಆಲೂಗಡ್ಡೆ ಮತ್ತು ಈರುಳ್ಳಿ ಸಂಸ್ಕರಣೆ ಮಾಡು ತ್ತಿದ್ದು, ಬೆಳೆಗಳು ಮಾರಾಟದ ಹಂತದಲ್ಲಿರು ವುದರಿಂದ ಸಂಕಷ್ಟ ಸೃಷ್ಟಿಸಿದರೆ, ಅಡಿಕೆ ತೋಟಗಳಲ್ಲಿ ಕೊಯಿಲಿಗೆ ತೆರಳಿರುವ ಕಾರ್ಮಿಕರಿಗೆ ಅಡಚಣೆ ಉಂಟಾಗಿದೆ.</p>.<p>ರಾಗಿ, ಶೇಂಗಾ ಬೆಳೆಗಳಿಗೆ ಈ ಮಳೆ ಅನುಕೂಲಕರವಾಗಿದ್ದು, ಅಡಕೆ, ತೆಂಗು, ಬಾಳೆ ಮತ್ತಿತರ ತೋಟಗಳಿಗೆ ಕೂಡಾ ನೆರವಾಗಿದೆ.</p>.<p class="Briefhead"><strong>ಉತ್ತಮ ಮಳೆ</strong></p>.<p><strong>ತರೀಕೆರೆ: </strong>ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.</p>.<p>ಸೋಮವಾರ ಸಂಜೆ ಆರಂಭವಾದ ಮಳೆ ಅರ್ಧ ತಾಸಿಗೂ ಹೆಚ್ಚು ಸಮಯ ಸುರಿದಿದ್ದು, ರಸ್ತೆ ಮೇಲೆ ನೀರು ಹರಿದು ಚರಂಡಿಗಳಲ್ಲಿ ಹರಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಿಗೆರೆ: </strong>ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ.</p>.<p>ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಪ್ರಾರಂಭವಾದ ಮಳೆ ಒಂದು ತಾಸಿಗೂ ಅಧಿಕ ಕಾಲ ಧಾರಾಕಾರವಾಗಿ ಸುರಿಯಿತು. ಭತ್ತ, ಕಾಫಿ, ಶುಂಠಿ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಯಿತು.</p>.<p>ದಾರದಹಳ್ಳಿ, ಮಾಕೋನಹಳ್ಳಿ, ಜನ್ನಾಪುರ, ಬೆಟ್ಟದಮನೆ ಮುಂತಾದ ಭಾಗಗಳಲ್ಲಿ ಕಟಾವಾಗಿ ಕಣದಲ್ಲಿ ಒಣಗಿಸುತ್ತಿದ್ದ ಅರೇಬಿಕಾ ಕಾಫಿಯೆಲ್ಲವೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಗಿಡದಲ್ಲಿ ಹಣ್ಣಾಗಿದ್ದ ಕಾಫಿಯು ಮಳೆಯ ರಭಸಕ್ಕೆ ನೆಲಕಚ್ಚಿದೆ.</p>.<p>ಮಳೆಯಿಂದ ಕೊಳೆರೋಗಕ್ಕೆ ತುತ್ತಾಗಿದ್ದ ಶುಂಠಿ ಬೆಳೆಯಲ್ಲಿ ರೋಗವು ಉಲ್ಬಣಿಸುವ ಸಂಕಷ್ಟ ಎದುರಾಗಿದೆ. ಅಲ್ಲದೆ, ಭತ್ತದ ಬೆಳೆಯ ತೆನೆ ಒಡೆಯುತ್ತಿದ್ದು, ತೆನೆಯ ಮೇಲೆ ಮಳೆ ಸುರಿದಿದ್ದರಿಂದ ಜೊಳ್ಳಾಗುವ ಭೀತಿ ಉಂಟಾಗಿದೆ.</p>.<p class="Briefhead"><strong>ಕಡೂರಿನಲ್ಲಿ ಮಳೆ</strong></p>.<p><strong>ಕಡೂರು: </strong>ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಬಿರುಸಿನಿಂದ ಭಾರಿ ಮಳೆಯಾಯಿತು.</p>.<p>ಸಂಜೆ ಐದು ಗಂಟೆ ಹೊತ್ತಿಗೆ ಗುಡುಗು ಮಿಂಚಿನಿಂದ ಕೂಡಿ ಆರಂಭವಾದ ಹಸ್ತಾ ಮಳೆ ನಿರಂತರವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ರಸ್ತೆಗಳ ಮೇಲೆಲ್ಲ ನೀರು ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.</p>.<p>ರಾಗಿ ಬೆಳೆದ ರೈತರಿಗೆ ಈ ಮಳೆ ಅನುಕೂಲವಾಗಿದೆ. ಈರುಳ್ಳಿ ಕಟಾವು ಮಾಡಿದ ರೈತರಿಗೆ ತುಸು ತೊಂದರೆಯಾಯಿತು. ಸುರಿವ</p>.<p class="Briefhead"><strong>ಅಬ್ಬರದ ಮಳೆ</strong></p>.<p><strong>ಬೀರೂರು: </strong>ಪಟ್ಟಣ ಮತ್ತು ಸುತ್ತಮುತ್ತ ಸೋಮವಾರ ಸಂಜೆ ಒಂದು ತಾಸಿಗೂ ಹೆಚ್ಚು ಮಳೆ ಸುರಿದು ಇಳೆಯನ್ನು ತಂಪಾಗಿಸಿದೆ.</p>.<p>ಹಲವು ರೈತರು ಆಲೂಗಡ್ಡೆ ಮತ್ತು ಈರುಳ್ಳಿ ಸಂಸ್ಕರಣೆ ಮಾಡು ತ್ತಿದ್ದು, ಬೆಳೆಗಳು ಮಾರಾಟದ ಹಂತದಲ್ಲಿರು ವುದರಿಂದ ಸಂಕಷ್ಟ ಸೃಷ್ಟಿಸಿದರೆ, ಅಡಿಕೆ ತೋಟಗಳಲ್ಲಿ ಕೊಯಿಲಿಗೆ ತೆರಳಿರುವ ಕಾರ್ಮಿಕರಿಗೆ ಅಡಚಣೆ ಉಂಟಾಗಿದೆ.</p>.<p>ರಾಗಿ, ಶೇಂಗಾ ಬೆಳೆಗಳಿಗೆ ಈ ಮಳೆ ಅನುಕೂಲಕರವಾಗಿದ್ದು, ಅಡಕೆ, ತೆಂಗು, ಬಾಳೆ ಮತ್ತಿತರ ತೋಟಗಳಿಗೆ ಕೂಡಾ ನೆರವಾಗಿದೆ.</p>.<p class="Briefhead"><strong>ಉತ್ತಮ ಮಳೆ</strong></p>.<p><strong>ತರೀಕೆರೆ: </strong>ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.</p>.<p>ಸೋಮವಾರ ಸಂಜೆ ಆರಂಭವಾದ ಮಳೆ ಅರ್ಧ ತಾಸಿಗೂ ಹೆಚ್ಚು ಸಮಯ ಸುರಿದಿದ್ದು, ರಸ್ತೆ ಮೇಲೆ ನೀರು ಹರಿದು ಚರಂಡಿಗಳಲ್ಲಿ ಹರಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>