ಕಳೆದ ವಾರ ಸುರಿದ ಮಳೆಗೆ ತುಂಬಿ ಹರಿದಿದ್ದ ನದಿಗಳೆಲ್ಲವೂ ಮಳೆ ಬಿಡುವಿನಿಂದ ಸಹಜ ಸ್ಥಿತಿಯತ್ತ ಮರಳುತ್ತಿದ್ದವು. ಆದರೆ, ಭಾನುವಾರ ಒಂದೇ ದಿನ ಸುರಿದ ಮಳೆಗೆ ನದಿಗಳ ನೀರಿನ ಹರಿಯುವ ಮಟ್ಟದಲ್ಲಿ ಗಣನೀಯ ಪ್ರಮಾಣದ ಏರಿಕೆಯುಂಟಾಗಿದ್ದು, ನದಿ ಪಾತ್ರದಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಯ ರೈತರಿಗೆ ಆತಂಕ ಉಂಟಾಗಿದೆ. ಮಳೆ ಹೆಚ್ಚಾಗಿರುವುದರಿಂದ ಶುಂಠಿ ಗದ್ದೆಗಳಿಗೂ ಹಾನಿಯಾಗಿದ್ದು, ಶುಂಠಿ ಬೆಳೆಗೆ ಕೊಳೆರೋಗ ಬರುವ ಆತಂಕ ಕಾಡುತ್ತಿದೆ.