ಕಡೂರು ಪಟ್ಟಣಕ್ಕೆ ಹತ್ತಿರದಲ್ಲಿರುವ ವೇದಾ ಪಂಪ್ಹೌಸ್ ಬಳಿ ಜಿ.ಟಿ.ಟಿ.ಸಿ. ಕಾಲೇಜಿನ ಪಕ್ಕವಿರುವ ಪುರಸಭೆಯ ಸುಮಾರು ಐದು ಎಕರೆ ಜಾಗ ಬಹುವರ್ಷಗಳಿಂದ ನಿರುಪಯೋಗಿಯಾಗಿತ್ತು. ಹಿರಿಯ ನಾಗರಿಕರಿಗೆ ಬೆಳಗಿನ ವಾಕಿಂಗ್ ಹೋಗಲು ಸೂಕ್ತ ಜಾಗವಿರಲಿಲ್ಲ. ಕೆಲವರು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ, ಕೆಲವರು ಎಪಿಎಂಸಿ ಪ್ರಾಂಗಣಕ್ಕೆ ಹೋಗುತ್ತಾರೆ. ಉದ್ಯಾನದ ಕೊರತೆ ನೀಗಿಸುವ ನಿಟ್ಟಿನಲ್ಲಿ ಪುರಸಭೆ ಇದರ ನಿರ್ಮಾಣಕ್ಕೆ ಮುಂದಾಗಿದೆ.