ಸರ್ಕಾರ ಹಾಗೂ ಮಲೆನಾಡು ಭಾಗದ ಸಚಿವರು ರೈತರಿಗೆ ಧೈರ್ಯ ಹೇಳಬೇಕು. ಈ ಸಮಯದಲ್ಲಿ ಬೇಜವಾಬ್ದಾರಿ ಹೇಳಿಕೆಯನ್ನು ಕಾನೂನು ಹಾಗೂ ಪರಿಹಾರ ರೂಪಿಸಬೇಕಾಗಿದ್ದ ಸದನದಲ್ಲಿ ಹೇಳಿರುವುದು ಅತ್ಯಂತ ವಿಷಾದನೀಯ. ಗಲ್ಲಿ ಗಲ್ಲಿಗಳಲ್ಲಿ ಬಾರ್ ಮತ್ತು ವೈನ್ ಶಾಪ್ಗಳಿಗೆ ಲೈಸೆನ್ಸ್ ಕೊಡುತ್ತಿರುವುದು ನಮ್ಮ ಭವಿಷ್ಯಕ್ಕೆ ಮಾರಕವಲ್ಲವೇ. ಕೆಲವು ದಿನಗಳ ಹಿಂದೆ ಅಡಿಕೆ ತೋಟಗಳಿಗೆ ಭೇಟಿ ನೀಡಿದ್ದು ಮಲೆನಾಡಿನ ಅಡಿಕೆ ಬೆಳೆಗಾರರ ಕಣ್ಣು ಒರೆಸುವ ತಂತ್ರನಾ? ಸಚಿವರೇ ಸದನದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಧ್ವನಿಯಾಗಿ, ರೈತರ ಪರವಾಗಿ ನಿಲ್ಲಬೇಕಾಗಿದ್ದು, ಪರಿಹಾರ ಕಂಡುಕೊಳ್ಳುವ ಸ್ಥಳದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಮಲೆನಾಡಿಗರ ದುರಂತ. ಸಚಿವರು ಈಗಲಾದರೂ ತಮ್ಮ ಹೇಳಿಕೆಯನ್ನು ಕಡತದಿಂದ ವಜಾಮಾಡಿ, ಮಲೆನಾಡಿಗರ ಆತಂಕವನ್ನು ದೂರಮಾಡಿ' ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.